ಭಾರತದ ಪಂಚಾಯತ್ ರಾಜ್ ವ್ಯವಸ್ಥೆಗೆ ಭವ್ಯ ಇತಿಹಾಸವಿದೆ. ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಜನರು ಭಾಗವಹಿಸಲು ಅನುಕೂಲವಾಗುವಂತೆ ಗ್ರಾಮ ಸಭೆಗಳನ್ನು ಗ್ರಾಮ ಪಂಚಾಯತ್ ವ್ಯವಸ್ಥೆಯಲ್ಲಿ ರೂಪಿಸಿದರು. ಇದು ಜನರಿಗೆ ತಮ್ಮ ಕುರಿತಾಗಿ ತೆಗೆದುಕೊಳ್ಳುವ ತೀರ್ಮಾನದಲ್ಲಿ ಭಾಗವಹಿಸಲು ಇರುವ ಒಂದು ಅಪೂರ್ವ ಅವಕಾಶ.ಗ್ರಾಮ ಪಂಚಾಯತ್ನ ಕೆಲಸ, ಕಾರ್ಯಗಳ ಬಗ್ಗೆ ತಿಳಿದುಕೊಳ್ಳಲು, ಗ್ರಾಮ ಪಂಚಾಯತ್ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರ ಗಮನ ಸೆಳೆಯಲು ಜನರಿಗೆ ಸಂವಿಧಾನಬದ್ಧ ಹಕ್ಕನ್ನು, ಅಧಿಕಾರವನ್ನು 73ನೇ ತಿದ್ದುಪಡಿ ದೊರಕಿಸಿಕೊಟ್ಟಿದೆ. ಸರ್ಕಾರದ ಎಲ್ಲಾ ಯೋಜನೆಗಳ ನೆರವು ಪಡೆದುಕೊಳ್ಳಲು ಫಲಾನುಭವಿಗಳ ಆಯ್ಕೆ ಮಾಡುವುದು ಗ್ರಾಮ ಸಭೆಯ ಅಧಿಕಾರ ಎಂದು ಈ ತಿದ್ದುಪಡಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. (ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿಯ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.)
ಆದರೆ ಕರ್ನಾಟಕ ರಾಜ್ಯದ ವಿಧಾನಮಂಡಲ 2007ರಲ್ಲಿ ಕೈಗೊಂಡ ಒಂದು ತೀರ್ಮಾನ, ಮೇಲೆ ಹೇಳಿದ ಎಲ್ಲಾ ಅಮೂಲ್ಯ ವಿಚಾರಗಳನ್ನೂ ಬದಿಗೊತ್ತಿದಂತೆ ಮಾಡಿತು.
ಆದರೆ ಕರ್ನಾಟಕ ರಾಜ್ಯದ ವಿಧಾನಮಂಡಲ 2007ರಲ್ಲಿ ಕೈಗೊಂಡ ಒಂದು ತೀರ್ಮಾನ, ಮೇಲೆ ಹೇಳಿದ ಎಲ್ಲಾ ಅಮೂಲ್ಯ ವಿಚಾರಗಳನ್ನೂ ಬದಿಗೊತ್ತಿದಂತೆ ಮಾಡಿತು.
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಹುಟ್ಟು:-
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಕರ್ನಾಟಕ ರಾಜ್ಯದ ಗ್ರಾಮ ಪಂಚಾಯತ್ ಮತ್ತು ಗ್ರಾಮ ಸಭೆಯ ಪ್ರತಿನಿಧಿಗಳ ಒಂದು ಆಂದೋಲನ. ಇದು ಸಂವಿಧಾನದಲ್ಲಿರುವ ಪ್ರಜಾಪ್ರಭುತ್ವ ವಿಕೇಂದ್ರೀಕರಣ ಮತ್ತು ಅಧಿಕಾರ ಹಸ್ತಾಂತರಗಳನ್ನು ರಕ್ಷಿಸುವ ಮತ್ತು ಕಾಪಾಡುವ ಹಾಗೂ ಈ ಸಂಸ್ಥೆಗಳನ್ನು ಸಮರ್ಥಗೊಳಿಸಲು, ವಿಶೇಷವಾಗಿ ತಳಮಟ್ಟದಲ್ಲಿ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಪರಿಣಾಮಕಾರಿ ಸಾಧನಗಳನ್ನಾಗಿ ಸಶಕ್ತಗೊಳಿಸುವ ಸಲುವಾಗಿ ಇದೆ.
2007ರಲ್ಲಿ ಕರ್ನಾಟಕ ವಿಧಾನ ಮಂಡಲದ ಎರಡೂ ಸದನಗಳು ಕರ್ನಾಟಕ ಪಂಚಾಯತ್ ಕಾಯಿದೆ 1993ಕ್ಕೆ ತಿದ್ದುಪಡಿಯೊಂದನ್ನು ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿದಾಗ ಅದನ್ನು ಪ್ರತಿಭಟಿಸಲು ಮೇ 16, 2007ರಂದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಅಸ್ತಿತ್ವಕ್ಕೆ ಬಂದಿತು. (ಈ ಕುರಿತಾದ ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ.)
ತಳಮಟ್ಟದಲ್ಲಿನ ಪ್ರಜೆಗಳು ಮತ್ತು ಗ್ರಾಮ ಪಂಚಾಯತ್-ಗಳ ಪರಮಾಧಿಕಾರದ ಮೇಲೆ ಈ ತಿದ್ದುಪಡಿ ಮಾರಕ ಪ್ರಹಾರ ಮಾಡಿತ್ತು. ಪ್ರಜಾಪ್ರಭುತ್ವದ ಮೂಲ ಬುನಾದಿಯನ್ನೇ ದುರ್ಬಲಗೊಳಿಸುವ ಒಂದು ಹುನ್ನಾರವಾಗಿತ್ತು ಈ ತಿದ್ದುಪಡಿ.
ಗ್ರಾಮದ ಅಭಿವೃದ್ಧಿಯಲ್ಲಿ ಸರ್ಕಾರಗಳು ಮತ್ತು ನಾಗರಿಕ ಸಮಾಜವು ಒಟ್ಟಾಗಿ 73ನೇ ತಿದ್ದುಪಡಿಯ ಆಶಯದಂತೆ ವಿಕೇಂದ್ರೀಕರಣ, ಗ್ರಾಮ ಪಂಚಾಯತ್-ಗಳ ಸಬಲೀಕರಣ, ಈ ನಿಟ್ಟಿನಲ್ಲಿ ಗ್ರಾಮ ಸಭಾ ಸದಸ್ಯರನ್ನು ಸಶಕ್ತಗೊಳಿಸುವಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ನಿರ್ಧರಿಸಿತು.
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನಕ್ಕೆ
ಸ್ಪೂರ್ತಿದಾತರು : ಶ್ರೀ ಎಲ್.ಸಿ.ಜೈನ್, ಮಾಜಿ ಸದಸ್ಯರು, ರಾಷ್ಟ್ರೀಯ ಯೋಜನಾ ಆಯೋಗ & ದಕ್ಷಿಣ ಆಫ್ರಿಕಾದ ಭಾರತದ ಮಾಜಿ ಭಾರತೀಯ ರಾಯಭಾರಿಗಳು
ಶ್ರೀ ಮನು ಕುಲಕರ್ಣಿ, ಗೌರವಾನ್ವಿತ ಹಿರಿಯ ಫೆಲೋ, ಸಾಮಾಜಿಕ ವಿಜ್ಞಾನಗಳ ಸಂಸ್ಥೆ, ಬೆಂಗಳೂರು
ಸಂಯೋಜನಾ ಸಮಿತಿ :ಮಹಿಳಾ ಸಮಖ್ಯಾ - ಕರ್ನಾಟಕ
ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್
ಸುಗ್ರಾಮ
ಜೆ.ಹೆಚ್.ಪಟೇಲ್ ಫೌಂಡೇಶನ್
ಗ್ರಾಮ ಸ್ವರಾಜ್ಯ ವೇದಿಕೆ
ಸಲಹೆಗಾರರು : ಶ್ರೀ ವಿನೋದ್ ವ್ಯಾಸುಲು, ವಿಕೇಂದ್ರೀಕರಣ ಚಿಂತಕರು
ಶ್ರೀ ಚಿರಂಜೀವಿ ಸಿಂಗ್, ಮಾಜಿ ಅಭಿವೃದ್ಧಿ ಆಯುಕ್ತರು, ಕರ್ನಾಟಕ ಸರ್ಕಾರ
ಶ್ರೀ ಮೀನಾಕ್ಷಿ ಸುಂದರಂ, ಮಾಜಿ ಕಾರ್ಯದರ್ಶಿಗಳು, ಗ್ರಾಮೀಣ ಅಭಿವೃದ್ಧಿ ಮಂತ್ರಾಲಯ, ಭಾರತ ಸರ್ಕಾರ
ಶ್ರೀ ರಘುನಂದನ್ ರಾಘವನ್, ಮಾಜಿ ಜಂಟಿ ಕಾರ್ಯದರ್ಶಿ, ಪಂಚಾಯತ್ ರಾಜ್ ಮಂತ್ರಾಲಯ, ಭಾರತ ಸರ್ಕಾರ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸರ್ಕಾರ, ಹಾಗೂ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ
ಶ್ರೀ ಮಹಿಮಾ ಪಟೇಲ್, ಟ್ರಸ್ಟೀ, ಜೆ.ಹೆಚ್.ಪಟೇಲ್ ಫೌಂಡೇಶನ್
ಶ್ರೀ ಮೈಕೆಲ್ ಫರ್ನಾಂಡಿಸ್, ಕಾರ್ಮಿಕ ಮುಖಂಡರು
ಶ್ರೀ ವಿನಯ್ ಬೈಂದೂರು, ಸಂಶೋಧಕರು - ವಿಕೇಂದ್ರೀಕರಣ
ಸ್ಪೂರ್ತಿದಾತರು : ಶ್ರೀ ಎಲ್.ಸಿ.ಜೈನ್, ಮಾಜಿ ಸದಸ್ಯರು, ರಾಷ್ಟ್ರೀಯ ಯೋಜನಾ ಆಯೋಗ & ದಕ್ಷಿಣ ಆಫ್ರಿಕಾದ ಭಾರತದ ಮಾಜಿ ಭಾರತೀಯ ರಾಯಭಾರಿಗಳು
ಶ್ರೀ ಮನು ಕುಲಕರ್ಣಿ, ಗೌರವಾನ್ವಿತ ಹಿರಿಯ ಫೆಲೋ, ಸಾಮಾಜಿಕ ವಿಜ್ಞಾನಗಳ ಸಂಸ್ಥೆ, ಬೆಂಗಳೂರು
ಸಂಯೋಜನಾ ಸಮಿತಿ :ಮಹಿಳಾ ಸಮಖ್ಯಾ - ಕರ್ನಾಟಕ
ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್
ಸುಗ್ರಾಮ
ಜೆ.ಹೆಚ್.ಪಟೇಲ್ ಫೌಂಡೇಶನ್
ಗ್ರಾಮ ಸ್ವರಾಜ್ಯ ವೇದಿಕೆ
ಸಲಹೆಗಾರರು : ಶ್ರೀ ವಿನೋದ್ ವ್ಯಾಸುಲು, ವಿಕೇಂದ್ರೀಕರಣ ಚಿಂತಕರು
ಶ್ರೀ ಚಿರಂಜೀವಿ ಸಿಂಗ್, ಮಾಜಿ ಅಭಿವೃದ್ಧಿ ಆಯುಕ್ತರು, ಕರ್ನಾಟಕ ಸರ್ಕಾರ
ಶ್ರೀ ಮೀನಾಕ್ಷಿ ಸುಂದರಂ, ಮಾಜಿ ಕಾರ್ಯದರ್ಶಿಗಳು, ಗ್ರಾಮೀಣ ಅಭಿವೃದ್ಧಿ ಮಂತ್ರಾಲಯ, ಭಾರತ ಸರ್ಕಾರ
ಶ್ರೀ ರಘುನಂದನ್ ರಾಘವನ್, ಮಾಜಿ ಜಂಟಿ ಕಾರ್ಯದರ್ಶಿ, ಪಂಚಾಯತ್ ರಾಜ್ ಮಂತ್ರಾಲಯ, ಭಾರತ ಸರ್ಕಾರ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸರ್ಕಾರ, ಹಾಗೂ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ
ಶ್ರೀ ಮಹಿಮಾ ಪಟೇಲ್, ಟ್ರಸ್ಟೀ, ಜೆ.ಹೆಚ್.ಪಟೇಲ್ ಫೌಂಡೇಶನ್
ಶ್ರೀ ಮೈಕೆಲ್ ಫರ್ನಾಂಡಿಸ್, ಕಾರ್ಮಿಕ ಮುಖಂಡರು
ಶ್ರೀ ವಿನಯ್ ಬೈಂದೂರು, ಸಂಶೋಧಕರು - ವಿಕೇಂದ್ರೀಕರಣ