ಪರಿಚಯ:-
ಗ್ರಾಮ ಸಭಾ ಹಾಗೂ ಗ್ರಾಮ ಪಂಚಾಯತ್ ಪ್ರತಿನಿಧಿಗಳಿಂದ, ಗ್ರಾಮ ಸಭಾ ಹಾಗೂ ಗ್ರಾಮ ಪಂಚಾಯತ್ ಪ್ರತಿನಿಧಿಗಳಿಗೆ, ಗ್ರಾಮ ಸಭಾ ಹಾಗೂ ಗ್ರಾಮ ಪಂಚಾಯತ್ ಪ್ರತಿನಿಧಿಗಳಿಗೋಸ್ಕರ ರಚಿತವಾಗಿರುವ ವೇದಿಕೆಯೇ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ. ಕರ್ನಾಟಕ ರಾಜ್ಯದ ಗ್ರಾಮ ಪಂಚಾಯತ್ ಮತ್ತು ಗ್ರಾಮ ಸಭೆಯ ಪ್ರತಿನಿಧಿಗಳ, ಆಸಕ್ತ ಚಿಂತಕರ ಹಾಗೂ ವಿಕೇಂದ್ರೀಕರಣದಲ್ಲಿ ಬದ್ಧತೆ ಇರುವ ಸಂಘ-ಸಂಸ್ಥೆಗಳ ಸಹಯೋಗದಲ್ಲಿ,ಸಹಭಾಗಿತ್ವದಲ್ಲಿ ರಚಿತವಾಗಿದೆ.
2007ರಲ್ಲಿ ಕರ್ನಾಟಕ ವಿಧಾನ ಮಂಡಲದ ಎರಡೂ ಸದನಗಳು ಕರ್ನಾಟಕ ಪಂಚಾಯತ್ ಕಾಯಿದೆ 1993ಕ್ಕೆ ತಿದ್ದುಪಡಿಯೊಂದನ್ನು ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿದಾಗ ಅದನ್ನು ಪ್ರತಿಭಟಿಸಲು ಮೇ 16, 2007ರಂದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಅಸ್ತಿತ್ವಕ್ಕೆ ಬಂದಿತು.
ಸಂವಿಧಾನದತ್ತ ಪ್ರಜಾಪ್ರಭುತ್ವ ವಿಕೇಂದ್ರೀಕರಣ ಬಲಪಡಿಸುವ ಮತ್ತು ಸಂವಿಧಾನ ವಿರೋಧಿ ಅಧಿಕಾರ ಹಸ್ತಾಂತರಗಳನ್ನು ತಡೆಯುವ, ವಿಕೇಂದ್ರೀಕೃತ ಜನಭಾಗವಹಿಸುವಿಕೆಯ ಪ್ರಜಾಪ್ರಭುತ್ವದ ತಳಹದಿಯಾಗಿರುವ ಸ್ಥಳೀಯ ಸಂಸ್ಥೆ/ಸರ್ಕಾರಗಳನ್ನು ಸಮರ್ಥಗೊಳಿಸಲು ವಿಶೇಷವಾಗಿ ತಳಮಟ್ಟದಲ್ಲಿ ಜನಪ್ರತಿನಿಧಿಗಳನ್ನು ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಪರಿಣಾಮಕಾರಿ ಸಾಧನಗಳನ್ನಾಗಿ ಸಶಕ್ತಗೊಳಿಸುವ ಉದ್ದೇಶ ಹೊಂದಿದೆ. ಆ ಮೂಲಕ ಪ್ರಜಾಪ್ರಭುತ್ವದ ತಳಹದಿಯಾದ ವಿಕೇಂದ್ರೀಕರಣವನ್ನು ಬಲಪಡಿಸಲು ಮತ್ತು ವಿಕೇಂದ್ರೀಕೃತ ಅಧಿಕಾರವನ್ನು ಎತ್ತಿಹಿಡಿಯುವಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸದಾ ಕಾರ್ಯನಿರ್ವಹಿಸುತ್ತದೆ.
ಕಾರ್ಯವ್ಯಾಪ್ತಿ: - ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಕರ್ನಾಟಕ ರಾಜ್ಯದ 29 ಜಿಲ್ಲೆಗಳಲ್ಲಿ ತನ್ನ ಕಾರ್ಯವ್ಯಾಪ್ತಿ ಹೊಂದಿದೆ.
ಸಕ್ರೀಯ ಸಹಭಾಗಿತ್ವ: - ಗ್ರಾಮ ಪಂಚಾಯತ್ ಸದಸ್ಯರನ್ನೊಳಗೊಂಡಂತೆ ಅಂದಾಜು 35,000 ಗ್ರಾಮ ಸಭಾ ಸದಸ್ಯರು ಆಂದೋಲನದಲ್ಲಿ ಭಾಗಿಯಾಗಿದ್ದಾರೆ.
ಸದಸ್ಯತ್ವ:- ಈ ಕೆಳಗಿನವರೆಲ್ಲರೂ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಸದಸ್ಯರಾಗಬಹುದು:
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ತನ್ನ ಕಾರ್ಯನಿರ್ವಹಿಸಲು ತನ್ನದೇ ಆದ ಕಾರ್ಯಕಾರಿ ಸಮಿತಿಯನ್ನೊಳಗೊಂಡ ರಾಜ್ಯ ಸಮಿತಿ, ಸಂಯೋಜನಾ ಸಮಿತಿ ಸಲಹಾ ಸಮಿತಿ ಹಾಗೂ ತಾಲೂಕು ಸಮಿತಿಗಳನ್ನೊಗೊಂಡಿದೆ. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಕಾರ್ಯಾಲಯವಾಗಿ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಕೈಗೆತ್ತಿಕೊಂಡ ಪ್ರಮುಖ ವಿಷಯಗಳು: -
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಪ್ರಕಟಣೆಗಳು:-
(ಈ ಯಾವುದೇ ಪ್ರಕಟಣೆಗಳು ಬೇಕಾದಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಕಾರ್ಯಾಲಯವನ್ನು ಸಂಪರ್ಕಿಸಬಹುದು)
- ಬ್ಯಾನರ್
- ಬ್ಯಾಡ್ಜ್
- ಸ್ಟಿಕರ್
- ಸಂಕಲನ
ಗ್ರಾಮ ಸಭಾ ಹಾಗೂ ಗ್ರಾಮ ಪಂಚಾಯತ್ ಪ್ರತಿನಿಧಿಗಳಿಂದ, ಗ್ರಾಮ ಸಭಾ ಹಾಗೂ ಗ್ರಾಮ ಪಂಚಾಯತ್ ಪ್ರತಿನಿಧಿಗಳಿಗೆ, ಗ್ರಾಮ ಸಭಾ ಹಾಗೂ ಗ್ರಾಮ ಪಂಚಾಯತ್ ಪ್ರತಿನಿಧಿಗಳಿಗೋಸ್ಕರ ರಚಿತವಾಗಿರುವ ವೇದಿಕೆಯೇ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ. ಕರ್ನಾಟಕ ರಾಜ್ಯದ ಗ್ರಾಮ ಪಂಚಾಯತ್ ಮತ್ತು ಗ್ರಾಮ ಸಭೆಯ ಪ್ರತಿನಿಧಿಗಳ, ಆಸಕ್ತ ಚಿಂತಕರ ಹಾಗೂ ವಿಕೇಂದ್ರೀಕರಣದಲ್ಲಿ ಬದ್ಧತೆ ಇರುವ ಸಂಘ-ಸಂಸ್ಥೆಗಳ ಸಹಯೋಗದಲ್ಲಿ,ಸಹಭಾಗಿತ್ವದಲ್ಲಿ ರಚಿತವಾಗಿದೆ.
2007ರಲ್ಲಿ ಕರ್ನಾಟಕ ವಿಧಾನ ಮಂಡಲದ ಎರಡೂ ಸದನಗಳು ಕರ್ನಾಟಕ ಪಂಚಾಯತ್ ಕಾಯಿದೆ 1993ಕ್ಕೆ ತಿದ್ದುಪಡಿಯೊಂದನ್ನು ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿದಾಗ ಅದನ್ನು ಪ್ರತಿಭಟಿಸಲು ಮೇ 16, 2007ರಂದು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಅಸ್ತಿತ್ವಕ್ಕೆ ಬಂದಿತು.
ಸಂವಿಧಾನದತ್ತ ಪ್ರಜಾಪ್ರಭುತ್ವ ವಿಕೇಂದ್ರೀಕರಣ ಬಲಪಡಿಸುವ ಮತ್ತು ಸಂವಿಧಾನ ವಿರೋಧಿ ಅಧಿಕಾರ ಹಸ್ತಾಂತರಗಳನ್ನು ತಡೆಯುವ, ವಿಕೇಂದ್ರೀಕೃತ ಜನಭಾಗವಹಿಸುವಿಕೆಯ ಪ್ರಜಾಪ್ರಭುತ್ವದ ತಳಹದಿಯಾಗಿರುವ ಸ್ಥಳೀಯ ಸಂಸ್ಥೆ/ಸರ್ಕಾರಗಳನ್ನು ಸಮರ್ಥಗೊಳಿಸಲು ವಿಶೇಷವಾಗಿ ತಳಮಟ್ಟದಲ್ಲಿ ಜನಪ್ರತಿನಿಧಿಗಳನ್ನು ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ಪರಿಣಾಮಕಾರಿ ಸಾಧನಗಳನ್ನಾಗಿ ಸಶಕ್ತಗೊಳಿಸುವ ಉದ್ದೇಶ ಹೊಂದಿದೆ. ಆ ಮೂಲಕ ಪ್ರಜಾಪ್ರಭುತ್ವದ ತಳಹದಿಯಾದ ವಿಕೇಂದ್ರೀಕರಣವನ್ನು ಬಲಪಡಿಸಲು ಮತ್ತು ವಿಕೇಂದ್ರೀಕೃತ ಅಧಿಕಾರವನ್ನು ಎತ್ತಿಹಿಡಿಯುವಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಸದಾ ಕಾರ್ಯನಿರ್ವಹಿಸುತ್ತದೆ.
ಕಾರ್ಯವ್ಯಾಪ್ತಿ: - ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಕರ್ನಾಟಕ ರಾಜ್ಯದ 29 ಜಿಲ್ಲೆಗಳಲ್ಲಿ ತನ್ನ ಕಾರ್ಯವ್ಯಾಪ್ತಿ ಹೊಂದಿದೆ.
ಸಕ್ರೀಯ ಸಹಭಾಗಿತ್ವ: - ಗ್ರಾಮ ಪಂಚಾಯತ್ ಸದಸ್ಯರನ್ನೊಳಗೊಂಡಂತೆ ಅಂದಾಜು 35,000 ಗ್ರಾಮ ಸಭಾ ಸದಸ್ಯರು ಆಂದೋಲನದಲ್ಲಿ ಭಾಗಿಯಾಗಿದ್ದಾರೆ.
ಸದಸ್ಯತ್ವ:- ಈ ಕೆಳಗಿನವರೆಲ್ಲರೂ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಸದಸ್ಯರಾಗಬಹುದು:
- ಕರ್ನಾಟಕದ ಎಲ್ಲಾ ಗ್ರಾಮ ಪಂಚಾಯತ್-ಗಳ ಹಾಲಿ ಹಾಗೂ ಮಾಜಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು,
- ಗ್ರಾಮ ಸಭಾ ಸದಸ್ಯರು,
- ವಿಕೇಂದ್ರೀಕರಣದಲ್ಲಿ ಆಸಕ್ತ ಮತ್ತು ಪರಿಣಿತರಾಗಿರುವ ಯಾವುದೇ ವ್ಯಕ್ತಿ ಮತ್ತು ಸಂಸ್ಥೆ,
- ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನಕ್ಕೆ ಮಾಹಿತಿ, ಮಾರ್ಗದರ್ಶನ ಹಾಗೂ ತಾಂತ್ರಿಕ ಸಹಾಯ ಒದಗಿಸುವ ಯಾವುದೇ ವ್ಯಕ್ತಿ ಹಾಗೂ ಸಂಸ್ಥೆ,
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ತನ್ನ ಕಾರ್ಯನಿರ್ವಹಿಸಲು ತನ್ನದೇ ಆದ ಕಾರ್ಯಕಾರಿ ಸಮಿತಿಯನ್ನೊಳಗೊಂಡ ರಾಜ್ಯ ಸಮಿತಿ, ಸಂಯೋಜನಾ ಸಮಿತಿ ಸಲಹಾ ಸಮಿತಿ ಹಾಗೂ ತಾಲೂಕು ಸಮಿತಿಗಳನ್ನೊಗೊಂಡಿದೆ. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಕಾರ್ಯಾಲಯವಾಗಿ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ಕೈಗೆತ್ತಿಕೊಂಡ ಪ್ರಮುಖ ವಿಷಯಗಳು: -
- ಸಂವಿಧಾನದ 73ನೇ ತಿದ್ದುಪಡಿಯನ್ನು ಎತ್ತಿಹಿಡಿಯುವಿಕೆ:- ಪ್ರಜಾಪ್ರಭುತ್ವದ ತಳಹದಿ ವಿಕೇಂದ್ರೀಕರಣವನ್ನು ಬಲಪಡಿಸುವಲ್ಲಿ ಸ್ಥಳೀಯ ಸರ್ಕಾರಗಳ ಅಧಿಕಾರವನ್ನು ಸ್ಪಷ್ಟವಾಗಿ ಎತ್ತಿಹಿಡಿದ ಸಂವಿಧಾನದ 73ನೇ ತಿದ್ದುಪಡಿಗೆ ಯಾವುದೇ ರೀತಿಯ ಪುನರ್ ತಿದ್ದುಪಡಿ ತರದಂತೆ ಹಕ್ಕೊತ್ತಾಯ.
- ಸರ್ಕಾರದ ಯಾವುದೇ ಕಾರ್ಯಕ್ರಮಗಳಿಗೆ ಫಲಾನುಭವಿಗಳ ಆಯ್ಕೆ ಮಾಡುವ ಅಧಿಕಾರ ಗ್ರಾಮ ಸಭೆಯದ್ದೇ:- ಸರ್ಕಾರದ ಕಾರ್ಯಕ್ರಮಗಳಿಗೆ ಗ್ರಾಮ ಸಭೆಯಲ್ಲಿ ಜನರು ಫಲಾನುಭವಿಗಳನ್ನು ಆಯ್ಕೆ ಮಾಡುವುದು ಸಂವಿಧಾನಬದ್ಧ ಹಕ್ಕು. ಗ್ರಾಮ ಸಭೆಯ ಈ ಅಧಿಕಾರದ ಮೇಲೆ ನಿರ್ಭಂಧ ಹೇರಲು ಯಾರಿಗೂ ಅಧಿಕಾರವಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ಅನುದಾನ ನೀಡುತ್ತಿರುವ ವಸತಿ ಹಾಗೂ ಇತರ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಮಾಡುವ ಅಧಿಕಾರವು ಗ್ರಾಮ ಸಭೆಯದ್ದೇ. ಇದನ್ನು ಯಾವುದೇ ಕಾರಣಕ್ಕೆ ಬದಲಾಯಿಸಲು ಸಾಧ್ಯವಿಲ್ಲ
- ಹಣಕಾಸು, ಕಾರ್ಯಗಳು ಮತ್ತು ಕಾರ್ಯ ನಿರ್ವಾಹಕರ ಹಸ್ತಾಂತರ:- ಸಂವಿಧಾನದ 73ನೇ ತಿದ್ದುಪಡಿ ಪ್ರಕರಣ XI ರಲ್ಲಿ ಮತ್ತು ಪಂಚಾಯತ್ ರಾಜ್ ಕಾಯಿದೆ 1993ರ ಅಧಿನಿಯಮದಲ್ಲಿ, ಸ್ಥಳೀಯ ಸರ್ಕಾರಗಳಿಗೆ ಎಲ್ಲಾ 29 ವಿಷಯಗಳ ಕಾರ್ಯಕ್ರಮಗಳು, ಹಣಕಾಸು ಮತ್ತು ಕಾರ್ಯನಿರ್ವಾಹಕರ ಹಸ್ತಾಂತರ ಪ್ರಕ್ರಿಯೆಗೆ ಕೊಡುವಂತಹ ಅತ್ಯಂತ ಸ್ಪಷ್ಟ ಪರಿಕಲ್ಪನೆ ಹಾಗೂ ಕಾರ್ಯರೂಪಿ ಮಾರ್ಗದರ್ಶಿ ಸೂತ್ರಗಳನ್ನು 'ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ'ವು ಮರುಪ್ರತಿಪಾದಿಸುತ್ತದೆ ಮತ್ತು ಒತ್ತು ನೀಡುತ್ತದೆ.
- ರಾಜ್ಯದ ಮೂರನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಅನುಷ್ಠಾನ:- ಕೇವಲ ಜನಸಂಖ್ಯೆಯ ಆಧಾರದ ಮೇಲೆ ಮಾತ್ರವಲ್ಲದೇ ಭೌಗೋಳಿಕ ಅಸಮಾನತೆ, ಹಿಂದುಳಿದಿರುವಿಕೆ ಹಾಗೂ ಗ್ರಾಮ ಪಂಚಾಯತ್ ಗಳ ಸಾಧನೆಗಳ ಆಧಾರದಲ್ಲಿ ಗ್ರಾಮ ಪಂಚಾಯತ್ ಗಳಿಗೆ ಶಾಸನಬದ್ಧ ಅಭಿವೃದ್ಧಿ ನಿಧಿಗಳನ್ನು ರಾಜ್ಯ ಸರ್ಕಾರ ಕೊಡಬೇಕು ಎನ್ನುವ ಮೂರನೇ ಹಣಕಾಸು ಆಯೋಗದ ಶಿಫಾರಸ್ಸು ಸೇರಿದಂತೆ ಅದರ ಎಲ್ಲಾ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು.
- ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಅಧ್ಯಕ್ಷರ ಸಹಿ ಕಡ್ಡಾಯ:- ಗ್ರಾಮ ಪಂಚಾಯತ್ ಗಳ ಯಾವುದೇ ಹಣಕಾಸಿಗೆ ಸಂಬಂಧಿಸಿದ ವ್ಯವಹಾರಗಳಿಗೆ ಅಧ್ಯಕ್ಷರ ಸಹಿಯನ್ನು ಕಡ್ಡಾಯಗೊಳಿಸಬೇಕು. ಯಾವುದೇ ಕಾರಣಕ್ಕೆ ಅಧ್ಯಕ್ಷರ ಈ ಅಧಿಕಾರವನ್ನು ಹಿಂತೆಗೆಯಲೇ ಬಾರದು.
- ಗ್ರಾಮ ಪಂಚಾಯತ್-ಗಳಿಗೆ ಹಣಕಾಸು ಮೀಸಲಾತಿ ಹಾಗೂ ಸೂಕ್ತ ಸಮಯದಲ್ಲಿ ಅನುದಾನ ಬಿಡುಗಡೆ:- ಗ್ರಾಮ ಪಂಚಾಯತ್ ಗಳಿಗೆ ಬಿಡುಗಡೆಯಾಗುವ ಅನುದಾನಗಳು ಸೂಕ್ತ ಸಮಯದಲ್ಲಿ ಗ್ರಾಮ ಪಂಚಾಯತ್ ಗಳನ್ನು ತಲುಪಿ, ಕ್ಲಪ್ತ ಸಮಯದಲ್ಲಿ ಅಭಿವೃದ್ಧಿ ಕಾರ್ಯಗಳು ಅನುಕೂಲವಾಗುವಂತೆ ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮಕ್ಕಾಗಿ ಒತ್ತಾಯ.
- ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಗೌರವಧನ ಹಾಗೂ ಸದಸ್ಯರ ಸಭಾಭತ್ಯೆ ಹೆಚ್ಚಿಸುವುದು:- ಜನತೆಗೆ ಅತ್ಯಂತ ಹತ್ತಿರವಿರುವ ಸರ್ಕಾರವೆಂದರೆ ಗ್ರಾಮ ಪಂಚಾಯತ್ ಹಾಗೂ ಅದರ ಅದರ ಚುನಾಯಿತ ಪ್ರತಿನಿಧಿಗಳು. ಜನರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸುವ ಇವರಿಗೆ ನೀಡುವ ಗೌರವ ಧನ ಹಾಗೂ ಸಭಾ ಭತ್ಯೆ ತುಂಬಾ ಕಡಿಮೆ. ಹೀಗಾಗಿ ಇಂದಿನ ದಿನಮಾನದಲ್ಲಿ ಜೀವನ ನಡೆಸಲು ಪೂರಕವಾಗುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಗೌರವಧನ ಹಾಗೂ ಸದಸ್ಯರ ಸಭಾ ಭತ್ಯೆಯನ್ನು ಹೆಚ್ಚಿಸಬೇಕು.
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಪ್ರಕಟಣೆಗಳು:-
(ಈ ಯಾವುದೇ ಪ್ರಕಟಣೆಗಳು ಬೇಕಾದಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಕಾರ್ಯಾಲಯವನ್ನು ಸಂಪರ್ಕಿಸಬಹುದು)
- ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ
- ಭಿತ್ತಿಪತ್ರಗಳು - ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ ಅಭಿಯಾನಕ್ಕೆ ಸಂಬಂಧಿಸಿದಂತೆ
- ಬ್ಯಾನರ್
- ಬ್ಯಾಡ್ಜ್
- ಸ್ಟಿಕರ್
- ಗ್ರಾಮ ಸ್ವರಾಜ್ಯ ಸಮಾವೇಶ 2011ಕ್ಕೆ ಸಂಬಂಧಿಸಿದಂತೆ
- ಸಂಕಲನ
ವಿನ್ಯಾಸ ಮತ್ತು ಅಭಿವೃದ್ಧಿ : ಶ್ರೀಮತಿ ಕೃಪಾ ಎಂ.ಎಂ.
ಮಾಹಿತಿ ಮತ್ತು ದಾಖಲಾತಿಗಳ ಸಹಕಾರ : ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್
ಶೀರ್ಷಿಕೆ ಚಿತ್ರ ವಿನ್ಯಾಸ: ಶ್ರೀ ಮಲ್ಲಿಕಾರ್ಜುನ ಕೊಂಡೂರಿ
ಕೃತಜ್ಞತೆಗಳು : ಕುಮಾರ್ ಪ್ರಜ್ವಲ್ ಬಿ,
ತಾಂತ್ರಿಕ ಸಹಾಯ : ಶ್ರೀ ರಾವ್, ಶ್ರೀ ರಮೇಶ ಮಲ್ಯ, ಶ್ರೀ ಅಜಿತ್ ಭಟ್ ಹೆಚ್.ಎಲ್.
ಮಾಹಿತಿ ಮತ್ತು ದಾಖಲಾತಿಗಳ ಸಹಕಾರ : ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್
ಶೀರ್ಷಿಕೆ ಚಿತ್ರ ವಿನ್ಯಾಸ: ಶ್ರೀ ಮಲ್ಲಿಕಾರ್ಜುನ ಕೊಂಡೂರಿ
ಕೃತಜ್ಞತೆಗಳು : ಕುಮಾರ್ ಪ್ರಜ್ವಲ್ ಬಿ,
ತಾಂತ್ರಿಕ ಸಹಾಯ : ಶ್ರೀ ರಾವ್, ಶ್ರೀ ರಮೇಶ ಮಲ್ಯ, ಶ್ರೀ ಅಜಿತ್ ಭಟ್ ಹೆಚ್.ಎಲ್.