ಮೌಲ್ಯಗಳು:
- ಸಶಕ್ತ ವಿಕೇಂದ್ರೀಕೃತ ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ನಂಬಿಕೆ ಹೊಂದಿದ ಇದು ಶಾಂತಿಯುತ ಆಂದೋಲನವಾಗಿದೆ.
- ಈ ಆಂದೋಲನ ಯಾವುದೇ ಒಂದು ರಾಜಕೀಯ ಪಕ್ಷದ, ವ್ಯಕ್ತಿಯ ವಿರುದ್ಧವಲ್ಲ.
- ವಿಕೇಂದ್ರೀಕರಣವನ್ನು ದುರ್ಬಲಗೊಳಿಸುವ ಎಲ್ಲಾ ಪ್ರಯತ್ನಗಳ ವಿರುದ್ಧವಾಗಿದೆ. ಹಾಗೂ ಪ್ರಜಾಪ್ರಭುತ್ವದ ವಿಕೇಂದ್ರೀಕರಣವನ್ನು ಯಾವುದೇ ಶಕ್ತಿಗಳು ದುರ್ಬಲಗೊಳಿಸದಂತೆ ರಕ್ಷಣೆ ಮತ್ತು ಬಲಪಡಿಸುವ ಸಲುವಾಗಿದೆ.
- ಇದು ಎಲ್ಲರನ್ನೊಳಗೊಂಡ ಸಮಾನತೆಯ ಮತ್ತು ಪ್ರಜಾಪ್ರಭುತ್ವದ ಆಂದೋಲನವಾಗಿದೆ.
- ಆಂದೋಲನದಿಂದ ಸಾರ್ವಜನಿಕರಿಗೆ ವಿನಾ ಕಾರಣ ಯಾವುದೇ ತೊಂದರೆ ಆಗುವುದಿಲ್ಲ.
- ಈ ಆಂದೋಲನವು ನ್ಯಾಯಯುತವಲ್ಲದ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿರುವ, ಪ್ರಜಾಪ್ರಭುತ್ವಕ್ಕೆ ವಿರುದ್ಧ ಯಾವುದೇ ಚಟುವಟಿಕೆಗಳನ್ನು ಒಳಗೊಂಡಿರುವುದಿಲ್ಲ.
- ಗ್ರಾಮಸಭೆ ಗಟ್ಟಿಗೊಳಿಸುವುದು ಇದರ ಆಧ್ಯತೆ.
- ಚುನಾವಣೆಗಳನ್ನು ಪ್ರಾಮಾಣಿಕವಾಗಿ, ಚೊಕ್ಕವಾಗಿ, ಆಸೆ-ಆಮಿಷಗಳಿಲ್ಲದೇ, ಅತಿ ವೆಚ್ಚವಿಲ್ಲದೇ ಸರಳವಾಗಿ ನಡೆಸುವುದು.
ಧ್ಯೇಯೋದ್ದೇಶಗಳು:
- ಸಂವಿಧಾನದ ರಕ್ಷಣೆ ಮತ್ತು ಎಲ್ಲಾ ಪ್ರಜೆಗಳ ಮೂಲಭೂತ ಹಕ್ಕುಗಳಿಗಾಗಿ ಹೋರಾಟ.
- ಪಂಚಾಯತ್ ರಾಜ್ ಹಕ್ಕುಗಳ ರಕ್ಷಣೆ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಸುದೃಢಗೊಳಿಸುವುದು.
- ಗ್ರಾಮ ಪಂಚಾಯತ್, ಗ್ರಾಮ ಸಭೆಯ ಬಗ್ಗೆ ನಮ್ಮ ಸಂವಿಧಾನದ ಆಶೋತ್ತರಗಳ ಅನುಷ್ಠಾನ ಮತ್ತು ರಕ್ಷಣೆ
- ಭಾಗವಹಿಸುವಿಕೆ ಪ್ರಜಾಪ್ರಭುತ್ವವನ್ನು ಉಳಿಸಿ, ಬೆಳೆಸಿ, ರಕ್ಷಿಸುವುದು; ಜನಭಾಗವಹಿಸುವಿಕೆಯ ಪ್ರಜಾಪ್ರಭುತ್ವದ ತತ್ವ, ರಚನೆ, ನೀತಿ-ನಿಯಮಗಳಿಗೆ ಪೂರಕವಾದ ಕೆಲಸಗಳನ್ನು ರೂಪಿಸುವುದು ಮತ್ತು ಆಚರಿಸುವುದು.
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಚಿಹ್ನೆ
ನೂರಾರು ವರ್ಷಗಳ ಚರಿತ್ರೆ ಇರುವ ಪಂಚಾಯತ್ ವ್ಯವಸ್ಥೆಯನ್ನು ಮರದ ಕೆಳಗೆ ಇರುವ ಕಟ್ಟೆ ಸೂಚಿಸುತ್ತದೆ. ಜೀವಂತಿಕೆ ಮತ್ತು ಹೊಸ ಸಾಧ್ಯತೆಗಳಿಂದ ನಳನಳಿಸುವ ಮರದ ತಂಪು ನೆರಳಿನಲ್ಲಿ ಧರ್ಮ, ಜಾತಿ, ಲಿಂಗ, ಪಕ್ಷಗಳ ಬೇಧವಿಲ್ಲದೆ ಒಗ್ಗಟ್ಟಾಗಿ ಜೊತೆಯಾಗಿರುವ ಮಹಿಳೆಯರು, ಪುರುಷರು ಮತ್ತು ಮಕ್ಕಳು ಇವು ನಮ್ಮ ಆಂದೋಲನವು ಪಂಚಾಯತ್ ವ್ಯವಸ್ಥೆಗೆ ಕೊಡಲು ಇಚ್ಛಿಸುವ ಹೊಸ ಚೌಕಟ್ಟು, ಆ ನವನಿರ್ಮಾಣಕ್ಕೆ ನಾವು ಪಾಲುದಾರಿಕೆಯಲ್ಲಿ ಕೊಟ್ಟಿರುವ ಬದ್ಧತೆಯ ಪ್ರತೀಕ.
- ಈ ಚಿಹ್ನೆಯನ್ನು ರಚಿಸಿ ಕೊಟ್ಟವರು ಶ್ರೀ ಮಲ್ಲಿಕಾರ್ಜುನ ಕೊಂಡೂರಿ
- ಈ ಚಿಹ್ನೆಯನ್ನು ರಚಿಸಿ ಕೊಟ್ಟವರು ಶ್ರೀ ಮಲ್ಲಿಕಾರ್ಜುನ ಕೊಂಡೂರಿ