ಹೂವಿನಹಡಗಲಿ ತಾಲೂಕು ಜಾರಿಪಡೆ ಸಭೆ
ದಿನಾಂಕ: 07.03.2022
ಸ್ಥಳ: ತಾಲೂಕು ಪಂಚಾಯತ್ ಸಭಾಂಗಣ, ಹೂವಿನಹಡಗಲಿ
ಹೂವಿನ ಹಡಗಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಗ್ರಾಮ ಪಂಚಾಯತ್ಗಳ ಭೀಮ ಸಂಘ - ದುಡಿಯುವ ಮಕ್ಕಳ ಸಂಘದ ಪ್ರತಿನಿಧಿಗಳು ಹೂವಿನ ಹಡಗಲಿ ತಾಲೂಕು ಆಡಳಿತದೊಂದಿಗೆ ಸಮಾಲೋಚನ (ಜಾರಿಪಡೆ ಸಭೆ) ನಡೆಸಿದರು. ಈ ಸಭೆಯು ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಸೌಕರ್ಯಕಾರಿಕೆಯಲ್ಲಿ ನಡೆಯಿತು.
'ಕೆ. ಅಯ್ಯನಹಳ್ಳಿ, ಹಿರೆಮಲ್ಲನಕೇರಿ ಮತ್ತು ಕಾಲ್ವಿ ಪಂಚಾಯತ್ಗಳಲ್ಲಿ ಭೀಮ ಸಂಘದವರಿಗೆ ಸ್ವ ಉದ್ಯೋಗ ತರಬೇತಿ ನೀಡಿದ್ದಾರೆ. ನಮ್ಮ ಗ್ರಾಮ ಪಂಚಾಯತ್ಗಳಲ್ಲಿ ದುಡಿಯುವ ಮಕ್ಕಳಾದ ನಮ್ಮ ಆರೋಗ್ಯ ತಪಾಸಣೆ ನಡೆಸಿದ್ದಾರೆ, ಬೀದಿ ದೀಪಗಳನ್ನು ಹಾಕಿದ್ದಾರೆ. ಒಂದೆರಡು ಕಡೆಗಳಲ್ಲಿ ಮದ್ಯ ಮಾರಾಟ ಸಮಸ್ಯೆಯು ಸಧ್ಯಕ್ಕೆ ನಿಂತಿದೆ. ಚರಂಡಿ ಸ್ವಚ್ಛತೆಯನ್ನು ಮಾಡಿದ್ದಾರೆ. ನಳ್ಳಿ ನೀರಿನ ವ್ಯವಸ್ಥೆ ಮಾಡಿದ್ದಾರೆ. - ಹೀಗೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಾರ್ಯಗಳನ್ನು ಕೈಗೊಂಡ ಗ್ರಾಮ ಪಂಚಾಯತ್ಗೆ ಧನ್ಯವಾದಗಳು' ಎಂದು ಬೇರೆ ಬೇರೆ ಗ್ರಾಮ ಪಂಚಾಯತ್ಗಳಿಂದ ಆಗಮಿಸಿದ ಭೀಮ ಸಂಘದ ಸದಸ್ಯರು ತಾಲೂಕು ಜಾರಿಪಡೆ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಜೊತೆಗೆ ಅವರವರ ಪ್ರದೇಶದಲ್ಲಿ ಗುರುತಿಸಿದ ವಿವಿಧ ಸಮಸ್ಯೆಗಳನ್ನು ಸಭೆಯಲ್ಲಿ ಹಂಚಿಕೊAಡರು. ಅಂಗವಿಕಲತೆಯಿರುವ ಮಗುವಿಗೆ ಮತ್ತು ಅನಾರೋಗ್ಯವಿರುವ ಮಕ್ಕಳಿಗೆ ಸರ್ಕಾರದಿಂದ ಸೌಲಭ್ಯಗಳು ಸಿಗಬೇಕು. ಶಾಲೆ ದೂರ ಇರುವುದರಿಂದ ಮಕ್ಕಳು ಶಾಲೆ ಬಿಡುತ್ತಿದ್ದಾರೆ, ಮನೆಯ ಪಕ್ಕದಲ್ಲಿರುವ ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬದ ತೆರವು ಮಾಡುವುದು. ಮೂರು ತಿಂಗಳು ಸ್ವ ಉದ್ಯೋಗ ತರಬೇತಿಯನ್ನು ಪಡೆದಿದ್ದು ಹೆಚ್ಚಿನ ಪರಿಣಿತಿಗೆ ಇನ್ನೂ 3 ತಿಂಗಳು ತರಬೇತಿಯನ್ನು ನೀಡಬೇಕು. ಶಾಲೆ ಬಿಟ್ಟ ಹೆಣ್ಣು ಮಕ್ಕಳಿಗೆ(ಕಿಶೋರಿಯರಿಗೆ) ಅಂಗನವಾಡಿಯಲ್ಲಿ ಕೊಡುತ್ತಿದ್ದ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳು, ಮಾತ್ರೆ ಹಾಗೂ ಶುಚಿ ಪ್ಯಾಡ್ಗಳನ್ನು ಪುನಃ ನೀಡಬೇಕು. ಮನೆಯಿಲ್ಲದವರಿಗೆ ಮನೆಗಳನ್ನು ನೀಡಬೇಕು. ಸೂಕ್ತ ರಸ್ತೆ ಮತ್ತು ಚರಂಡಿ ನಿರ್ಮಾಣ ಆಗದೇ ಇರುವುದರಿಂದ ಸಮಸ್ಯೆಯಾಗುತ್ತಿದೆ. ರುದ್ರಭೂಮಿ, ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು. ಶೌಚಾಲಯ ನಿರ್ಮಾಣ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು. ಚರಂಡಿ ತುಂಬಿಕೊಂಡು ನೀರು ರಸ್ತೆಗೆ ಬರುತ್ತದೆ. ಹಾಗಾಗಿ ಚರಂಡಿಯನ್ನು ಆಗಾಗ ಸ್ವಚ್ಛಗೊಳಿಸಬೇಕು. ಕೆಲವು ಪಂಚಾಯತ್ಗಳಲ್ಲಿ, ಗೂಡಂಗಡಿಯಲ್ಲಿ, ಮನೆಯಲ್ಲಿ ಅನಧಿಕೃತವಾಗಿ ಮದ್ಯವನ್ನು ಮಾರಾಟ ಮಾಡುತ್ತಾರೆ ಇದನ್ನು ನಿಲ್ಲಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರಿ ಪ್ರಭುರೆಡ್ಡಿಯವರು, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶ್ರೀ ಯು. ಸೋಮಶೇಖರ್ ಮತ್ತು ಶ್ರೀ ಹೇಮಾದ್ರಿ ನಾಯ್ಕರವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಎನ್. ಹಳ್ಳಿಗುಡಿಯವರು ಭೀಮ ಸಂಘದ ಪ್ರತಿನಿಧಿಗಳು ಎತ್ತಿದ ವಿಷಯಗಳಿಗೆ ಸ್ಪಂದಿಸಿ, ಪ್ರತಿಕ್ರಿಯೆಯನ್ನು ನೀಡಿದರು.
ಆರೋಗ್ಯ ಸಮಸ್ಯೆಯಿರುವ ಮಕ್ಕಳ ದಾಖಲೆಯನ್ನು ಪಡೆದು ವೈದ್ಯಾಧಿಕಾರಿಗಳಿಗೆ ನೀಡಿ ಅವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಮುಂದಿನ ಅನುಸರಣೆಗಳನ್ನು ಮಾಡುವುದು, ಮದ್ಯ ಮಾರಾಟ ನಡೆಯುವ ಪ್ರದೇಶಗಳ ಪಟ್ಟಿಯನ್ನು ಪಡೆದು ಇಂದಿನ ಸಭೆಯ ನಿರ್ಣಯದೊಂದಿಗೆ ಕ್ರಮಕ್ಕಾಗಿ ಅಬಕಾರಿ ನಿರೀಕ್ಷಕರಿಗೆ ಕಳುಹಿಸುವುದು. ಪಂಚಾಯತ್ ವ್ಯಾಪ್ತಿಯ ಸಮಸ್ಯೆಗಳನ್ನು ಗ್ರಾಮ ಪಂಚಾಯತ್ಗಳಿಗೆ ಕಳುಹಿಸಿ ಅಲ್ಲಿಯೇ ಬಗೆಹರಿಸುವಂತೆ ಮಾಡುವುದು.
ದುಡಿಯುವ ಮಕ್ಕಳು ಕೇಳಿದ ಸ್ವ ಉದ್ಯೋಗ ತರಬೇತಿಗೆ ಸಂಬಂಧಿಸಿದಂತೆ ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಅಂದರೆ ಆರ್ಸೆಟ್ಟಿ ಮತ್ತು ರುಡ್ ಸೆಟ್ಟಿಯ ಮೂಲಕ ನಡೆಯುವ ಉನ್ನತಿ ಕಾರ್ಯಕ್ರಮ ಹಾಗೂ ಸಂಜೀವಿನಿ ಸಂಘದ ಮೂಲಕ ನೀಡುವ ವಿವಿಧ ತರಬೇತಿಗಳಾದ ಅಕ್ಕಿ ರೊಟ್ಟಿ ತಯಾರಿ, ಜೋಳದ ರೊಟ್ಟಿ ತಯಾರಿ, ಫೆನಾಯಿಲ್ ತಯಾರಿ, ಮೇಣದ ಬತ್ತಿ, ಊದುಬತ್ತಿ ತಯಾರಿ, ನರ್ಸರಿ ಗಿಡ ಬೆಳೆಸುವುದು ಮುಂತಾದ ತರಬೇತಿಗಳ ಬಗ್ಗೆ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡ ಸಹಾಯಕ ನಿರ್ದೇಶಕರು, ಅದರಡಿಯಲ್ಲಿ ತರಬೇತಿ ಪಡೆಯಲು ಇಚ್ಛಿಸುವವರ ಮಾಹಿತಿ ನೀಡುವಂತೆ ತಿಳಿಸಿದರು. ನರೇಗಾ ಕಾಯ್ದೆಯಡಿಯಲ್ಲಿರುವ ಕೆಲಸಗಳ ವಿವರ ಹಾಗೂ ನರೇಗಾದಡಿಯಲ್ಲಿ ವಿಕಲಚೇತನರಿಗೆ ಇರುವ ಅವಕಾಶಗಳ ಬಗ್ಗೆಯೂ ಮಾಹಿತಿಯನ್ನು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಇಲಾಖೆಯ ವಿಷಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಕೊರೊನಾ ಕಾಲದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಮತ್ತು ಅವರ ಕುಟುಂಬಕ್ಕೆ ಸರ್ಕಾರದಿಂದ ಘೋಷಿಸಿದ ಸಹಾಯಧನ ಯೋಜನೆಗಳು ಸಕಾಲದಲ್ಲಿ ಸಿಗದೇ ಇರುವುದರ ಬಗ್ಗೆ ಮತ್ತು ಕೊರೊನಾ ಸಂಬಂಧಿತ ಸಹಾಯಧನ ಯೋಜನೆಗಳ ಚೆಕ್ ಬಂದಿದ್ದು ಅವುಗಳನ್ನು ಬ್ಯಾಂಕ್ ಅಕೌಂಟಿಗೆ ಹಣ ಜಮೆಯಾಗದಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಈ ಕುರಿತಾಗಿ ಸಂಬAಧಪಟ್ಟ ಇಲಾಖೆಯೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಈ ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಕ್ಕಳ ಮಿತ್ರರು, ವಿವಿಧ ಗ್ರಾಮ ಪಂಚಾಯತ್ಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಹೂವಿನಹಡಗಲಿ ತಾಲೂಕಿನ 11 ಗ್ರಾಮ ಪಂಚಾಯತ್ಗಳ 55 ದುಡಿಯುವ ಮಕ್ಕಳು ಮತ್ತು ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿದ್ದರು.
'ಕೆ. ಅಯ್ಯನಹಳ್ಳಿ, ಹಿರೆಮಲ್ಲನಕೇರಿ ಮತ್ತು ಕಾಲ್ವಿ ಪಂಚಾಯತ್ಗಳಲ್ಲಿ ಭೀಮ ಸಂಘದವರಿಗೆ ಸ್ವ ಉದ್ಯೋಗ ತರಬೇತಿ ನೀಡಿದ್ದಾರೆ. ನಮ್ಮ ಗ್ರಾಮ ಪಂಚಾಯತ್ಗಳಲ್ಲಿ ದುಡಿಯುವ ಮಕ್ಕಳಾದ ನಮ್ಮ ಆರೋಗ್ಯ ತಪಾಸಣೆ ನಡೆಸಿದ್ದಾರೆ, ಬೀದಿ ದೀಪಗಳನ್ನು ಹಾಕಿದ್ದಾರೆ. ಒಂದೆರಡು ಕಡೆಗಳಲ್ಲಿ ಮದ್ಯ ಮಾರಾಟ ಸಮಸ್ಯೆಯು ಸಧ್ಯಕ್ಕೆ ನಿಂತಿದೆ. ಚರಂಡಿ ಸ್ವಚ್ಛತೆಯನ್ನು ಮಾಡಿದ್ದಾರೆ. ನಳ್ಳಿ ನೀರಿನ ವ್ಯವಸ್ಥೆ ಮಾಡಿದ್ದಾರೆ. - ಹೀಗೆ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಾರ್ಯಗಳನ್ನು ಕೈಗೊಂಡ ಗ್ರಾಮ ಪಂಚಾಯತ್ಗೆ ಧನ್ಯವಾದಗಳು' ಎಂದು ಬೇರೆ ಬೇರೆ ಗ್ರಾಮ ಪಂಚಾಯತ್ಗಳಿಂದ ಆಗಮಿಸಿದ ಭೀಮ ಸಂಘದ ಸದಸ್ಯರು ತಾಲೂಕು ಜಾರಿಪಡೆ ಸಭೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಜೊತೆಗೆ ಅವರವರ ಪ್ರದೇಶದಲ್ಲಿ ಗುರುತಿಸಿದ ವಿವಿಧ ಸಮಸ್ಯೆಗಳನ್ನು ಸಭೆಯಲ್ಲಿ ಹಂಚಿಕೊAಡರು. ಅಂಗವಿಕಲತೆಯಿರುವ ಮಗುವಿಗೆ ಮತ್ತು ಅನಾರೋಗ್ಯವಿರುವ ಮಕ್ಕಳಿಗೆ ಸರ್ಕಾರದಿಂದ ಸೌಲಭ್ಯಗಳು ಸಿಗಬೇಕು. ಶಾಲೆ ದೂರ ಇರುವುದರಿಂದ ಮಕ್ಕಳು ಶಾಲೆ ಬಿಡುತ್ತಿದ್ದಾರೆ, ಮನೆಯ ಪಕ್ಕದಲ್ಲಿರುವ ಬೀಳುವ ಸ್ಥಿತಿಯಲ್ಲಿರುವ ವಿದ್ಯುತ್ ಕಂಬದ ತೆರವು ಮಾಡುವುದು. ಮೂರು ತಿಂಗಳು ಸ್ವ ಉದ್ಯೋಗ ತರಬೇತಿಯನ್ನು ಪಡೆದಿದ್ದು ಹೆಚ್ಚಿನ ಪರಿಣಿತಿಗೆ ಇನ್ನೂ 3 ತಿಂಗಳು ತರಬೇತಿಯನ್ನು ನೀಡಬೇಕು. ಶಾಲೆ ಬಿಟ್ಟ ಹೆಣ್ಣು ಮಕ್ಕಳಿಗೆ(ಕಿಶೋರಿಯರಿಗೆ) ಅಂಗನವಾಡಿಯಲ್ಲಿ ಕೊಡುತ್ತಿದ್ದ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳು, ಮಾತ್ರೆ ಹಾಗೂ ಶುಚಿ ಪ್ಯಾಡ್ಗಳನ್ನು ಪುನಃ ನೀಡಬೇಕು. ಮನೆಯಿಲ್ಲದವರಿಗೆ ಮನೆಗಳನ್ನು ನೀಡಬೇಕು. ಸೂಕ್ತ ರಸ್ತೆ ಮತ್ತು ಚರಂಡಿ ನಿರ್ಮಾಣ ಆಗದೇ ಇರುವುದರಿಂದ ಸಮಸ್ಯೆಯಾಗುತ್ತಿದೆ. ರುದ್ರಭೂಮಿ, ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕು. ಶೌಚಾಲಯ ನಿರ್ಮಾಣ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು. ಚರಂಡಿ ತುಂಬಿಕೊಂಡು ನೀರು ರಸ್ತೆಗೆ ಬರುತ್ತದೆ. ಹಾಗಾಗಿ ಚರಂಡಿಯನ್ನು ಆಗಾಗ ಸ್ವಚ್ಛಗೊಳಿಸಬೇಕು. ಕೆಲವು ಪಂಚಾಯತ್ಗಳಲ್ಲಿ, ಗೂಡಂಗಡಿಯಲ್ಲಿ, ಮನೆಯಲ್ಲಿ ಅನಧಿಕೃತವಾಗಿ ಮದ್ಯವನ್ನು ಮಾರಾಟ ಮಾಡುತ್ತಾರೆ ಇದನ್ನು ನಿಲ್ಲಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರಿ ಪ್ರಭುರೆಡ್ಡಿಯವರು, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಶ್ರೀ ಯು. ಸೋಮಶೇಖರ್ ಮತ್ತು ಶ್ರೀ ಹೇಮಾದ್ರಿ ನಾಯ್ಕರವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಎನ್. ಹಳ್ಳಿಗುಡಿಯವರು ಭೀಮ ಸಂಘದ ಪ್ರತಿನಿಧಿಗಳು ಎತ್ತಿದ ವಿಷಯಗಳಿಗೆ ಸ್ಪಂದಿಸಿ, ಪ್ರತಿಕ್ರಿಯೆಯನ್ನು ನೀಡಿದರು.
ಆರೋಗ್ಯ ಸಮಸ್ಯೆಯಿರುವ ಮಕ್ಕಳ ದಾಖಲೆಯನ್ನು ಪಡೆದು ವೈದ್ಯಾಧಿಕಾರಿಗಳಿಗೆ ನೀಡಿ ಅವರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಮುಂದಿನ ಅನುಸರಣೆಗಳನ್ನು ಮಾಡುವುದು, ಮದ್ಯ ಮಾರಾಟ ನಡೆಯುವ ಪ್ರದೇಶಗಳ ಪಟ್ಟಿಯನ್ನು ಪಡೆದು ಇಂದಿನ ಸಭೆಯ ನಿರ್ಣಯದೊಂದಿಗೆ ಕ್ರಮಕ್ಕಾಗಿ ಅಬಕಾರಿ ನಿರೀಕ್ಷಕರಿಗೆ ಕಳುಹಿಸುವುದು. ಪಂಚಾಯತ್ ವ್ಯಾಪ್ತಿಯ ಸಮಸ್ಯೆಗಳನ್ನು ಗ್ರಾಮ ಪಂಚಾಯತ್ಗಳಿಗೆ ಕಳುಹಿಸಿ ಅಲ್ಲಿಯೇ ಬಗೆಹರಿಸುವಂತೆ ಮಾಡುವುದು.
ದುಡಿಯುವ ಮಕ್ಕಳು ಕೇಳಿದ ಸ್ವ ಉದ್ಯೋಗ ತರಬೇತಿಗೆ ಸಂಬಂಧಿಸಿದಂತೆ ಬೇರೆ ಬೇರೆ ಯೋಜನೆಗಳ ಅಡಿಯಲ್ಲಿ ಅಂದರೆ ಆರ್ಸೆಟ್ಟಿ ಮತ್ತು ರುಡ್ ಸೆಟ್ಟಿಯ ಮೂಲಕ ನಡೆಯುವ ಉನ್ನತಿ ಕಾರ್ಯಕ್ರಮ ಹಾಗೂ ಸಂಜೀವಿನಿ ಸಂಘದ ಮೂಲಕ ನೀಡುವ ವಿವಿಧ ತರಬೇತಿಗಳಾದ ಅಕ್ಕಿ ರೊಟ್ಟಿ ತಯಾರಿ, ಜೋಳದ ರೊಟ್ಟಿ ತಯಾರಿ, ಫೆನಾಯಿಲ್ ತಯಾರಿ, ಮೇಣದ ಬತ್ತಿ, ಊದುಬತ್ತಿ ತಯಾರಿ, ನರ್ಸರಿ ಗಿಡ ಬೆಳೆಸುವುದು ಮುಂತಾದ ತರಬೇತಿಗಳ ಬಗ್ಗೆ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಂಡ ಸಹಾಯಕ ನಿರ್ದೇಶಕರು, ಅದರಡಿಯಲ್ಲಿ ತರಬೇತಿ ಪಡೆಯಲು ಇಚ್ಛಿಸುವವರ ಮಾಹಿತಿ ನೀಡುವಂತೆ ತಿಳಿಸಿದರು. ನರೇಗಾ ಕಾಯ್ದೆಯಡಿಯಲ್ಲಿರುವ ಕೆಲಸಗಳ ವಿವರ ಹಾಗೂ ನರೇಗಾದಡಿಯಲ್ಲಿ ವಿಕಲಚೇತನರಿಗೆ ಇರುವ ಅವಕಾಶಗಳ ಬಗ್ಗೆಯೂ ಮಾಹಿತಿಯನ್ನು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಣ ಇಲಾಖೆಯ ವಿಷಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಕೊರೊನಾ ಕಾಲದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಮತ್ತು ಅವರ ಕುಟುಂಬಕ್ಕೆ ಸರ್ಕಾರದಿಂದ ಘೋಷಿಸಿದ ಸಹಾಯಧನ ಯೋಜನೆಗಳು ಸಕಾಲದಲ್ಲಿ ಸಿಗದೇ ಇರುವುದರ ಬಗ್ಗೆ ಮತ್ತು ಕೊರೊನಾ ಸಂಬಂಧಿತ ಸಹಾಯಧನ ಯೋಜನೆಗಳ ಚೆಕ್ ಬಂದಿದ್ದು ಅವುಗಳನ್ನು ಬ್ಯಾಂಕ್ ಅಕೌಂಟಿಗೆ ಹಣ ಜಮೆಯಾಗದಿರುವ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಈ ಕುರಿತಾಗಿ ಸಂಬAಧಪಟ್ಟ ಇಲಾಖೆಯೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಈ ಸಭೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಕ್ಕಳ ಮಿತ್ರರು, ವಿವಿಧ ಗ್ರಾಮ ಪಂಚಾಯತ್ಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು, ಹೂವಿನಹಡಗಲಿ ತಾಲೂಕಿನ 11 ಗ್ರಾಮ ಪಂಚಾಯತ್ಗಳ 55 ದುಡಿಯುವ ಮಕ್ಕಳು ಮತ್ತು ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಕಾರ್ಯಕರ್ತರು ಭಾಗವಹಿಸಿದ್ದರು.