ಹಗರಿಬೊಮ್ಮನಹಳ್ಳಿ ತಾಲೂಕು ಜಾರಿಪಡೆ ಸಭೆ
ದಿನಾಂಕ: 07.03.2022
ಸ್ಥಳ: ತಾಲೂಕು ಪಂಚಾಯತ್ ಸಭಾಂಗಣ, ಹಗರಿಬೊಮ್ಮನಹಳ್ಳಿ
ಹಗರಿಬೊಮ್ಮನಹಳ್ಳಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿವಿಧ ಗ್ರಾಮ ಪಂಚಾಯತ್ಗಳ ಭೀಮ ಸಂಘ - ದುಡಿಯುವ ಮಕ್ಕಳ ಸಂಘದ ಪ್ರತಿನಿಧಿಗಳು ಹಗರಿಬೊಮ್ಮನಹಳ್ಳಿ ತಾಲೂಕು ಆಡಳಿತದೊಂದಿಗೆ ಸಮಾಲೋಚನ (ಜಾರಿಪಡೆ ಸಭೆ) ನಡೆಸಿದರು. ಈ ಸಭೆಯು ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಸೌಕರ್ಯಕಾರಿಕೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ದುಡಿಯುವ ಮಕ್ಕಳ ಪ್ರತಿನಿಧಿಗಳು ಈ ಹಿಂದೆ ವಿವಿಧ ಹಂತದಲ್ಲಿ ಎತ್ತಿದ ಸಮಸ್ಯೆಗಳಿಗೆ ಗ್ರಾಮ ಪಂಚಾಯತ್ಗಳು ನೀಡಿದ ಪರಿಹಾರಗಳ ವಿಷಯವನ್ನು ಹಂಚಿಕೊಂಡು ಪಂಚಾಯತ್ಗಳ ಬದ್ಧತೆಗೆ ಧನ್ಯವಾದಗಳನ್ನು ಹೇಳಿದರು.
ಭೀಮ ಸಂಘದ ಪ್ರತಿನಿಧಿಗಳು, ಬಡತನದಿಂದ ಶಾಲೆ ಬಿಟ್ಟು ದುಡಿಯುತ್ತಿದ್ದೇವೆ. ನಮ್ಮ ಊರಿನಲ್ಲಿ ಕೇವಲ ಕಿರಿಯ ಪ್ರಾಥಮಿಕ ಶಾಲೆಗಳು ಮಾತ್ರ ಇದ್ದು ಹಿರಿಯ ಪ್ರಾಥಮಿಕ ಶಾಲೆಗಳಿಗೆ 2 ಕಿಲೋ ಮೀಟರ್ಗಿಂತ ದೂರ ನಡೆದುಕೊಂಡು ಹೋಗಬೇಕಾಗಿರುವುದರಿಂದ ಶಾಲೆ ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ನಮ್ಮ ಊರಿಗೆ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವ್ಯವಸ್ಥೆಯನ್ನು ಮಾಡಿಸಿ, ಗ್ರಾಮದ ಪ್ರತಿ ಮನೆಗೆ ನೀರಿನ ಪೂರೈಕೆ ಮತ್ತು ಹಳ್ಳಿಯಿಂದ ದೂರವಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಳ್ಳಿಯಲ್ಲಿಯೇ ನಿರ್ಮಿಸಬೇಕು. ಅಂಗನವಾಡಿಯ ಪಕ್ಕ, ಗುಡಿಯ ಪಕ್ಕ ಹಾಗೂ ಊರಿನಲ್ಲಿ ಮನೆಯ ಹತ್ತಿರದ ಚರಂಡಿಗಳು ತುಂಬಿಕೊಂಡು ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತಿದ್ದು ಅವುಗಳನ್ನು ತುರ್ತಾಗಿ ಸ್ವಚ್ಛಗೊಳಿಸಬೇಕು. ರಸ್ತೆಗಳನ್ನು ರಿಪೇರಿ ಮಾಡಬೇಕು, ಬೀದಿ ದೀಪಗಳನ್ನು ಹಾಕಬೇಕು ಮತ್ತು ವಾಕ್-ಶ್ರವಣ ಸಮಸ್ಯೆಯಿರುವ ಭೀಮ ಸಂಘದ ಸದಸ್ಯರೊಬ್ಬರಿಗೆ ಅವರ ಆರೋಗ್ಯ ತಪಾಸಣೆ ನಡೆಸಿ ಅಗತ್ಯವಾದ ಶ್ರವಣ ಉಪಕರಣ ನೀಡಿ, ಅಂಗವಿಕಲರ ಮಾಸಾಶನ ನೀಡಬೇಕು ಹಾಗೂ ಊರಿನಲ್ಲಿ ಮನೆಯಿಲ್ಲದವರಿಗೆ ಮನೆಯನ್ನು ನೀಡಬೇಕು ಎಂದು ಹಕ್ಕೊತ್ತಾಯ ಮಾಡಿದರು.
ಮುಂದುವರೆದು, ಕಿಶೋರಿಯರಿಗೆ ನೀಡಬೇಕಾದ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳು, ಶುಚಿ ಪ್ಯಾಡ್ಗಳು ಮತ್ತು ಮಾತ್ರೆಗಳನ್ನು ನೀಡುವುದು ನಿಲ್ಲಿಸಲಾಗಿದೆ. ಅವುಗಳನ್ನು ಪುನಃ ಆರಂಭಿಸಬೇಕು. ದುಡಿಯುವ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರಿಗೆ ಅಗತ್ಯವಿರುವ ಪೌಷ್ಠಿಕ ಆಹಾರವನ್ನು ನೀಡಬೇಕು. ಅವರಿರುವ ಪ್ರದೇಶದಲ್ಲಿ ಸ್ಥಳೀಯವಾಗಿ ಸ್ವ ಉದ್ಯೋಗ ತರಬೇತಿಗಳನ್ನು ನೀಡಬೇಕು, ನರೇಗಾದಡಿಯಲ್ಲಿ 16 ವರ್ಷ ಮೇಲ್ಪಟ್ಟವರಿಗೆ ಸುರಕ್ಷಿತ ಕೆಲಸಗಳನ್ನು ನೀಡಬೇಕು, ಬಾಲ್ಯ ವಿವಾಹಗಳಾಗದಂತೆ ನೋಡಿಕೊಳ್ಳಬೇಕು ಮತ್ತು ಅದರ ಕುರಿತು ಜಾಗೃತಿ ಮೂಡಿಸಬೇಕು, ಊರನಲ್ಲಿ ನಡೆಯುವ ಅನಧಿಕೃತ ಮದ್ಯ ಮಾರಾಟವನ್ನು ತಡೆದು ಮಕ್ಕಳು, ಮಹಿಳೆಯರಿಗೆ ರಕ್ಷಣೆಯನ್ನು ನೀಡಬೇಕು ಎಂದು ತಾಲೂಕು ಆಡಳಿತವನ್ನು ಒತ್ತಾಯಿಸಿದರು.
ಈ ವಿಷಯಗಳಿಗೆ ತಹಶೀಲ್ದಾರರಾದ ಶ್ರೀಮತಿ ಶರಣಮ್ಮನವರು ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ರಮೇಶ್ರವರು ಪ್ರತಿಕ್ರಿಯೆ ನೀಡುತ್ತಾ, ವಾಕ್-ಶ್ರವಣ ಸಮಸ್ಯೆಯಿರುವ ಮಗುವಿನ ಸಮಸ್ಯೆಗೆ ಸಂಬಂಧಿಸಿದAತೆ ಮಾಹಿತಿಗಳನ್ನು ಪಡೆದು ಶೀಘ್ರವೇ ಅಂಗವಿಕಲ ವೇತನಕ್ಕೆ ಅರ್ಜಿ ಸಲ್ಲಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಆದೇಶಿಸಿ ಅವರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಪರಿಕರ ನೀಡಲು ವೈದ್ಯಾಧಿಕಾರಿಗಳಿಗೆ ತತ್ಕ್ಷಣವೇ ಸೂಚಿಸಿದರು. ಚರಂಡಿ ಸ್ವಚ್ಛತೆ, ರಸ್ತೆ ನಿರ್ಮಾಣ, ಬೀದಿ ದೀಪ ಮುಂತಾದ ವಿಷಯಗಳಿಗೆ ಗ್ರಾಮ ಪಂಚಾಯತ್ನಿAದ ಶೀಘ್ರವಾಗಿ ಪರಿಹಾರ ನೀಡಲಾಗುವುದು ಎಂದರು. ಕಿಶೋರಿಯರಿಗೆ ಪೌಷ್ಠಿಕಾಂಶದ ಆಹಾರ ಪದಾರ್ಥಗಳು ಹಾಗೂ ಪೂರಕ ಸಾಮಗ್ರಿಗಳನ್ನು ನೀಡುವ `ಸಬಲ ಯೋಜನೆ' ಪುನರ್ ಆರಂಭಕ್ಕೆ ಇಲಾಖೆಗೆ ಪತ್ರ ಬರೆಯುವುದು ಹಾಗೂ ಆರೋಗ್ಯ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಅದರಂತೆ ಉಳಿದ ವಿಷಯಗಳಿಗೆ ತಾಲೂಕು ಆಡಳಿತದಿಂದ ಪರಿಹಾರಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆಯನ್ನಿತ್ತರು.
ಕೊರೊನಾ ಕಾಲದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಮತ್ತು ಅವರ ಕುಟುಂಬಕ್ಕೆ ಸರ್ಕಾರದಿಂದ ಘೋಷಿಸಿದ ಸಹಾಯಧನ ಯೋಜನೆಗಳು ಸಕಾಲದಲ್ಲಿ ಸಿಗದೇ ಇರುವುದರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಈ ಕುರಿತಾಗಿ ಸಂಬAಧಪಟ್ಟ ಇಲಾಖೆಯೊಂದಿಗೆ ಮಾತನಾಡುವುದಾಗಿ ತಿಳಿಸಿದರು. ವೈದ್ಯಾಧಿಕಾರಿಗಳು ಮಾತನಾಡುತ್ತಾ `ಸ್ನೇಹ ಕ್ಲಿನಿಕ್' ನಿಂದ ಪಡೆಯಬಹುದಾದ ಆರೋಗ್ಯ ಸೌಲಭ್ಯಗಳು ಹಾಗೂ ಸೇವೆಗಳ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊAಡು ಅವುಗಳ ಪ್ರಯೋಜನ ಪಡೆಯುವಂತೆ ತಿಳಿಸಿದರು. ಭಾಗವಹಿಸಿದ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ಪಂಚಾಯತ್ಗಳಿಗೆ ಸಂಬಂಧಿಸಿದ ವಿಷಯಗಳಿಗೆ ಪ್ರತಿಕ್ರಿಯೆಗಳನ್ನು ನೀಡಿದರು.
ಈ ಸಭೆಯಲ್ಲಿ ದುಡಿಯುವ ಮಕ್ಕಳ ಪ್ರತಿನಿಧಿಗಳು ಈ ಹಿಂದೆ ವಿವಿಧ ಹಂತದಲ್ಲಿ ಎತ್ತಿದ ಸಮಸ್ಯೆಗಳಿಗೆ ಗ್ರಾಮ ಪಂಚಾಯತ್ಗಳು ನೀಡಿದ ಪರಿಹಾರಗಳ ವಿಷಯವನ್ನು ಹಂಚಿಕೊಂಡು ಪಂಚಾಯತ್ಗಳ ಬದ್ಧತೆಗೆ ಧನ್ಯವಾದಗಳನ್ನು ಹೇಳಿದರು.
ಭೀಮ ಸಂಘದ ಪ್ರತಿನಿಧಿಗಳು, ಬಡತನದಿಂದ ಶಾಲೆ ಬಿಟ್ಟು ದುಡಿಯುತ್ತಿದ್ದೇವೆ. ನಮ್ಮ ಊರಿನಲ್ಲಿ ಕೇವಲ ಕಿರಿಯ ಪ್ರಾಥಮಿಕ ಶಾಲೆಗಳು ಮಾತ್ರ ಇದ್ದು ಹಿರಿಯ ಪ್ರಾಥಮಿಕ ಶಾಲೆಗಳಿಗೆ 2 ಕಿಲೋ ಮೀಟರ್ಗಿಂತ ದೂರ ನಡೆದುಕೊಂಡು ಹೋಗಬೇಕಾಗಿರುವುದರಿಂದ ಶಾಲೆ ಬಿಡುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ನಮ್ಮ ಊರಿಗೆ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವ್ಯವಸ್ಥೆಯನ್ನು ಮಾಡಿಸಿ, ಗ್ರಾಮದ ಪ್ರತಿ ಮನೆಗೆ ನೀರಿನ ಪೂರೈಕೆ ಮತ್ತು ಹಳ್ಳಿಯಿಂದ ದೂರವಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಳ್ಳಿಯಲ್ಲಿಯೇ ನಿರ್ಮಿಸಬೇಕು. ಅಂಗನವಾಡಿಯ ಪಕ್ಕ, ಗುಡಿಯ ಪಕ್ಕ ಹಾಗೂ ಊರಿನಲ್ಲಿ ಮನೆಯ ಹತ್ತಿರದ ಚರಂಡಿಗಳು ತುಂಬಿಕೊಂಡು ಆರೋಗ್ಯ ಸಮಸ್ಯೆಯನ್ನುಂಟು ಮಾಡುತ್ತಿದ್ದು ಅವುಗಳನ್ನು ತುರ್ತಾಗಿ ಸ್ವಚ್ಛಗೊಳಿಸಬೇಕು. ರಸ್ತೆಗಳನ್ನು ರಿಪೇರಿ ಮಾಡಬೇಕು, ಬೀದಿ ದೀಪಗಳನ್ನು ಹಾಕಬೇಕು ಮತ್ತು ವಾಕ್-ಶ್ರವಣ ಸಮಸ್ಯೆಯಿರುವ ಭೀಮ ಸಂಘದ ಸದಸ್ಯರೊಬ್ಬರಿಗೆ ಅವರ ಆರೋಗ್ಯ ತಪಾಸಣೆ ನಡೆಸಿ ಅಗತ್ಯವಾದ ಶ್ರವಣ ಉಪಕರಣ ನೀಡಿ, ಅಂಗವಿಕಲರ ಮಾಸಾಶನ ನೀಡಬೇಕು ಹಾಗೂ ಊರಿನಲ್ಲಿ ಮನೆಯಿಲ್ಲದವರಿಗೆ ಮನೆಯನ್ನು ನೀಡಬೇಕು ಎಂದು ಹಕ್ಕೊತ್ತಾಯ ಮಾಡಿದರು.
ಮುಂದುವರೆದು, ಕಿಶೋರಿಯರಿಗೆ ನೀಡಬೇಕಾದ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥಗಳು, ಶುಚಿ ಪ್ಯಾಡ್ಗಳು ಮತ್ತು ಮಾತ್ರೆಗಳನ್ನು ನೀಡುವುದು ನಿಲ್ಲಿಸಲಾಗಿದೆ. ಅವುಗಳನ್ನು ಪುನಃ ಆರಂಭಿಸಬೇಕು. ದುಡಿಯುವ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವರಿಗೆ ಅಗತ್ಯವಿರುವ ಪೌಷ್ಠಿಕ ಆಹಾರವನ್ನು ನೀಡಬೇಕು. ಅವರಿರುವ ಪ್ರದೇಶದಲ್ಲಿ ಸ್ಥಳೀಯವಾಗಿ ಸ್ವ ಉದ್ಯೋಗ ತರಬೇತಿಗಳನ್ನು ನೀಡಬೇಕು, ನರೇಗಾದಡಿಯಲ್ಲಿ 16 ವರ್ಷ ಮೇಲ್ಪಟ್ಟವರಿಗೆ ಸುರಕ್ಷಿತ ಕೆಲಸಗಳನ್ನು ನೀಡಬೇಕು, ಬಾಲ್ಯ ವಿವಾಹಗಳಾಗದಂತೆ ನೋಡಿಕೊಳ್ಳಬೇಕು ಮತ್ತು ಅದರ ಕುರಿತು ಜಾಗೃತಿ ಮೂಡಿಸಬೇಕು, ಊರನಲ್ಲಿ ನಡೆಯುವ ಅನಧಿಕೃತ ಮದ್ಯ ಮಾರಾಟವನ್ನು ತಡೆದು ಮಕ್ಕಳು, ಮಹಿಳೆಯರಿಗೆ ರಕ್ಷಣೆಯನ್ನು ನೀಡಬೇಕು ಎಂದು ತಾಲೂಕು ಆಡಳಿತವನ್ನು ಒತ್ತಾಯಿಸಿದರು.
ಈ ವಿಷಯಗಳಿಗೆ ತಹಶೀಲ್ದಾರರಾದ ಶ್ರೀಮತಿ ಶರಣಮ್ಮನವರು ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ರಮೇಶ್ರವರು ಪ್ರತಿಕ್ರಿಯೆ ನೀಡುತ್ತಾ, ವಾಕ್-ಶ್ರವಣ ಸಮಸ್ಯೆಯಿರುವ ಮಗುವಿನ ಸಮಸ್ಯೆಗೆ ಸಂಬಂಧಿಸಿದAತೆ ಮಾಹಿತಿಗಳನ್ನು ಪಡೆದು ಶೀಘ್ರವೇ ಅಂಗವಿಕಲ ವೇತನಕ್ಕೆ ಅರ್ಜಿ ಸಲ್ಲಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಆದೇಶಿಸಿ ಅವರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಪರಿಕರ ನೀಡಲು ವೈದ್ಯಾಧಿಕಾರಿಗಳಿಗೆ ತತ್ಕ್ಷಣವೇ ಸೂಚಿಸಿದರು. ಚರಂಡಿ ಸ್ವಚ್ಛತೆ, ರಸ್ತೆ ನಿರ್ಮಾಣ, ಬೀದಿ ದೀಪ ಮುಂತಾದ ವಿಷಯಗಳಿಗೆ ಗ್ರಾಮ ಪಂಚಾಯತ್ನಿAದ ಶೀಘ್ರವಾಗಿ ಪರಿಹಾರ ನೀಡಲಾಗುವುದು ಎಂದರು. ಕಿಶೋರಿಯರಿಗೆ ಪೌಷ್ಠಿಕಾಂಶದ ಆಹಾರ ಪದಾರ್ಥಗಳು ಹಾಗೂ ಪೂರಕ ಸಾಮಗ್ರಿಗಳನ್ನು ನೀಡುವ `ಸಬಲ ಯೋಜನೆ' ಪುನರ್ ಆರಂಭಕ್ಕೆ ಇಲಾಖೆಗೆ ಪತ್ರ ಬರೆಯುವುದು ಹಾಗೂ ಆರೋಗ್ಯ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಕ್ರಮಕೈಗೊಳ್ಳುವಂತೆ ಸೂಚಿಸಿದರು. ಅದರಂತೆ ಉಳಿದ ವಿಷಯಗಳಿಗೆ ತಾಲೂಕು ಆಡಳಿತದಿಂದ ಪರಿಹಾರಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆಯನ್ನಿತ್ತರು.
ಕೊರೊನಾ ಕಾಲದಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳಿಗೆ ಮತ್ತು ಅವರ ಕುಟುಂಬಕ್ಕೆ ಸರ್ಕಾರದಿಂದ ಘೋಷಿಸಿದ ಸಹಾಯಧನ ಯೋಜನೆಗಳು ಸಕಾಲದಲ್ಲಿ ಸಿಗದೇ ಇರುವುದರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಈ ಕುರಿತಾಗಿ ಸಂಬAಧಪಟ್ಟ ಇಲಾಖೆಯೊಂದಿಗೆ ಮಾತನಾಡುವುದಾಗಿ ತಿಳಿಸಿದರು. ವೈದ್ಯಾಧಿಕಾರಿಗಳು ಮಾತನಾಡುತ್ತಾ `ಸ್ನೇಹ ಕ್ಲಿನಿಕ್' ನಿಂದ ಪಡೆಯಬಹುದಾದ ಆರೋಗ್ಯ ಸೌಲಭ್ಯಗಳು ಹಾಗೂ ಸೇವೆಗಳ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊAಡು ಅವುಗಳ ಪ್ರಯೋಜನ ಪಡೆಯುವಂತೆ ತಿಳಿಸಿದರು. ಭಾಗವಹಿಸಿದ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಮ್ಮ ಪಂಚಾಯತ್ಗಳಿಗೆ ಸಂಬಂಧಿಸಿದ ವಿಷಯಗಳಿಗೆ ಪ್ರತಿಕ್ರಿಯೆಗಳನ್ನು ನೀಡಿದರು.