ಹಿನ್ನೆಲೆ:-
ನಮ್ಮ ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣದ ವಿಚಾರದಲ್ಲಿ, ಪ್ರಯೋಗಗಳು ಮುಂದುವರಿಯುತ್ತಾ ಬಂದವು. 1993 ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಯ ಪ್ರಕಾರ ಗ್ರಾಮ ಸಭೆ ಪ್ರಾರಂಭದಲ್ಲಿ ತುಂಬಾ ದುರ್ಬಲವಾಗಿ ರೂಪುಗೊಂಡಿತ್ತು. ಸೆಕ್ಷನ್ 3ರಂತೆ ಕನಿಷ್ಟ 6 ತಿಂಗಳಿಗೊಮ್ಮೆ ಗ್ರಾಮ ಸಭೆ ಸೇರುವುದು. ಒಂದೊಮ್ಮೆ ಗ್ರಾಮ ಪಂಚಾಯತ್ ಗ್ರಾಮ ಸಭೆಯನ್ನು ಕರೆಯುವಲ್ಲಿ ವಿಫಲವಾದಲ್ಲಿ, ಆ ಪ್ರದೇಶಕ್ಕೆ ಸಂಬಂಧಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮ ಸಭೆಯನ್ನು ಕರೆಯಬಹುದಾಗಿತ್ತು. ಆ ಗ್ರಾಮ ಸಭೆಗೆ ಕೇವಲ ಸಲಹೆ ನೀಡುವ ಅಧಿಕಾರ ಮಾತ್ರವಿತ್ತು.
2001ರಲ್ಲಿ ಆಗಿನ ಪಂಚಾಯತ್ ರಾಜ್ ಸಚಿವರಾಗಿದ್ದ ಶ್ರೀ ಎಂ.ವೈ. ಘೋರ್ಪಡೆ ಅವರು ಆಗಿನ ರಾಜ್ಯದ ಅಭಿವೃದ್ಧಿ ಕಮಿಷನರ್ ಆಗಿದ್ದ ಶ್ರೀ ಎನ್. ವಿಶ್ವನಾಥನ್ ನೇತೃತ್ವದಲ್ಲಿ ಕಾರ್ಯನಿರ್ವಹಣಾ ತಂಡ ರಚಿಸಿ ಪಂಚಾಯತ್ ರಾಜ್ ಕಾಯಿದೆಯನ್ನು ಪುನರ್ ರಚಿಸಲು ಅಧ್ಯಯನ ನಡೆಸಿ ವರದಿ ನೀಡಲು ನೇಮಿಸಿದರು. ಈ ಕಾರ್ಯನಿರ್ವಹಣಾ ತಂಡವು 2002ರಲ್ಲಿ ತನ್ನ ವರದಿಯನ್ನು ಸಲ್ಲಿಸುತ್ತಾ ಹಲವು ಬದಲಾವಣೆಗಳನ್ನು ಸೂಚಿಸಿತು. ಅದರಲ್ಲಿನ ಮುಖ್ಯ ಅಂಶವೆಂದರೆ ಸರ್ಕಾರದ ಕಾರ್ಯಕ್ರಮಗಳ ಫಲಾನುಭವಿಗಳ ಆಯ್ಕೆಗೆ ಗ್ರಾಮ ಮಟ್ಟಕ್ಕಿಂತ ಇನ್ನೂ ತಳಮಟ್ಟಕ್ಕೆ ಹೋಗಿ, ಗ್ರಾಮ ಸಭೆಯ ಕೆಳಗೆ ವಾರ್ಡ್ ಸಭೆಗಳನ್ನು ರಚಿಸಿ, ಆ ಎರಡು ಸಭೆಗಳು ಉನ್ನತ ರೀತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಲಹೆಯನ್ನು ನೀಡಿತು.
ಈ ತಿದ್ದುಪಡಿಯ ಬಗ್ಗೆ ವಿಧಾನ ಮಂಡಲದ ಒಳಗೆ-ಹೊರಗೆ ವಿಸ್ತೃತ ರೀತಿಯಲ್ಲಿ ಚರ್ಚೆಗೆ ಒಳಗಾಗಿತ್ತು. ವಿಧಾನಮಂಡಲದಲ್ಲಿ ಈ ಕರಡು ತಿದ್ದುಪಡಿಯನ್ನು ಮಂಡಿಸುತ್ತಾ ಸ್ವತಃ ಸಚಿವರೇ ಇದನ್ನು ಸದನದ ಜಂಟಿ ಸಮಿತಿಯ ಪರಿಶೀಲನೆಗೆ ನೀಡಲು ಸಲಹೆ ನೀಡಿದರು. ಸದನ ಸಮಿತಿಯಲ್ಲಿ ಆಳವಾದ ಚರ್ಚೆ ನಡೆಯಿತು. 2003ರಲ್ಲಿ ಉಭಯ ಸದನಗಳಲ್ಲಿ ಸರ್ವಾನುಮತದಲ್ಲಿ ಈ ತಿದ್ದುಪಡಿ ಅಂಗೀಕಾರವಾಯಿತು. ಈ ಐತಿಹಾಸಿಕ ತಿದ್ದುಪಡಿ ಕರ್ನಾಟಕ ರಾಜ್ಯವನ್ನು ಜನಭಾಗವಹಿಸುವಿಕೆಯ ಪ್ರಜಾಪ್ರಭುತ್ವದಲ್ಲಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಆಲೋಚನೆಗಳಲ್ಲಿ ಮುಂಚೂಣಿಯಲ್ಲಿ ನೆಲೆಸುವಂತೆ ಮಾಡಿತು.
ಗ್ರಾಮ ಸಭೆ ಮತ್ತು ವಾರ್ಡ್ ಸಭೆಯಂತಹ ಮಹತ್ವದ ಬದಲಾವಣೆಯೊಡನೆ 2003ರ ಇನ್ನೊಂದು ಮಹತ್ವದ ಮೈಲಿಗಲ್ಲು ಎನ್ನಬಹುದಾದ ಬದಲಾವಣೆ ಎಂದರೆ ತಳಮಟ್ಟದಲ್ಲಿ ಜನಭಾಗವಹಿಸುವಿಕೆಯ ಮೂಲಕ 19 ಕಾರ್ಯಕ್ರಮಗಳ ಬಗ್ಗೆ ವಾರ್ಷಿಕ ಯೋಜನೆ, ಆಧ್ಯತಾಪಟ್ಟಿ ತಯಾರಿಸುವಿಕೆ, ಫಲಾನುಭವಿಗಳ ಆಯ್ಕೆಗೆ ಅವಕಾಶ ಸಿಕ್ಕಿತು. ಕುಡಿಯುವ ನೀರಿನ ಹಂಚಿಕೆ, ಶಿಕ್ಷಣ ಮೊದಲಾದ ಕಾರ್ಯಕ್ರಮಗಳ ಬಗ್ಗೆ ಈ ವಾರ್ಡ್ ಮತ್ತು ಗ್ರಾಮ ಸಭೆಗಳು ನಿರ್ಧಾರ ತೆಗೆದುಕೊಳ್ಳುವಂತಹ ಹಕ್ಕುಗಳು ನೀಡಲ್ಪಟ್ಟವು. 2003ರ ತಿದ್ದುಪಡಿಯ ಸೆಕ್ಷನ್ 3(3)(ಬಿ)ಯ ಮೂಲಕ ಯಾವುದೇ ಅನುಮಾನಕ್ಕೆ ಎಡೆ ಇಲ್ಲದಂತೆ ವಾರ್ಡ್ ಮತ್ತು ಗ್ರಾಮ ಸಭೆಗೆ ಫಲಾನುಭವಿಗಳ ಆಯ್ಕೆಯ ಹಕ್ಕನ್ನು ನೀಡಲಾಗಿದೆ. ವಾರ್ಡ್ ಸಭೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆಯಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತ್ ಮಂಡಿಸಬೇಕು. ಸೆಕ್ಷನ್ 3ಎ (3)(ಸಿ)ಯಂತೆ ಗ್ರಾಮ ಸಭೆ ಈ ಪಟ್ಟಿಯನ್ನು ಪರಿಶೀಲಿಸಿ ಆಧ್ಯತೆ ಮಾಡಿ ಅಂಗೀಕರಿಸಬೇಕು. ಹೀಗೆ ವಿಸ್ತೃತವಾಗಿ ಸೂಚಿಸಿದ ನಿಯಮಾವಳಿಗಳಿಗೆ ಒಳಪಟ್ಟು ತಯಾರಿಸಿದ ಫಲಾನುಭವಿಗಳ ಆಯ್ಕೆಯ ಪಟ್ಟಿಯನ್ನು ಮೇಲಿನ ಯಾವುದೇ ಹಂತದ ಸರ್ಕಾರಗಳು ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ.
ನಮ್ಮ ರಾಜ್ಯದಲ್ಲಿ ಅಧಿಕಾರ ವಿಕೇಂದ್ರೀಕರಣದ ವಿಚಾರದಲ್ಲಿ, ಪ್ರಯೋಗಗಳು ಮುಂದುವರಿಯುತ್ತಾ ಬಂದವು. 1993 ಕರ್ನಾಟಕ ಪಂಚಾಯತ್ ರಾಜ್ ಕಾಯಿದೆಯ ಪ್ರಕಾರ ಗ್ರಾಮ ಸಭೆ ಪ್ರಾರಂಭದಲ್ಲಿ ತುಂಬಾ ದುರ್ಬಲವಾಗಿ ರೂಪುಗೊಂಡಿತ್ತು. ಸೆಕ್ಷನ್ 3ರಂತೆ ಕನಿಷ್ಟ 6 ತಿಂಗಳಿಗೊಮ್ಮೆ ಗ್ರಾಮ ಸಭೆ ಸೇರುವುದು. ಒಂದೊಮ್ಮೆ ಗ್ರಾಮ ಪಂಚಾಯತ್ ಗ್ರಾಮ ಸಭೆಯನ್ನು ಕರೆಯುವಲ್ಲಿ ವಿಫಲವಾದಲ್ಲಿ, ಆ ಪ್ರದೇಶಕ್ಕೆ ಸಂಬಂಧಿಸಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮ ಸಭೆಯನ್ನು ಕರೆಯಬಹುದಾಗಿತ್ತು. ಆ ಗ್ರಾಮ ಸಭೆಗೆ ಕೇವಲ ಸಲಹೆ ನೀಡುವ ಅಧಿಕಾರ ಮಾತ್ರವಿತ್ತು.
2001ರಲ್ಲಿ ಆಗಿನ ಪಂಚಾಯತ್ ರಾಜ್ ಸಚಿವರಾಗಿದ್ದ ಶ್ರೀ ಎಂ.ವೈ. ಘೋರ್ಪಡೆ ಅವರು ಆಗಿನ ರಾಜ್ಯದ ಅಭಿವೃದ್ಧಿ ಕಮಿಷನರ್ ಆಗಿದ್ದ ಶ್ರೀ ಎನ್. ವಿಶ್ವನಾಥನ್ ನೇತೃತ್ವದಲ್ಲಿ ಕಾರ್ಯನಿರ್ವಹಣಾ ತಂಡ ರಚಿಸಿ ಪಂಚಾಯತ್ ರಾಜ್ ಕಾಯಿದೆಯನ್ನು ಪುನರ್ ರಚಿಸಲು ಅಧ್ಯಯನ ನಡೆಸಿ ವರದಿ ನೀಡಲು ನೇಮಿಸಿದರು. ಈ ಕಾರ್ಯನಿರ್ವಹಣಾ ತಂಡವು 2002ರಲ್ಲಿ ತನ್ನ ವರದಿಯನ್ನು ಸಲ್ಲಿಸುತ್ತಾ ಹಲವು ಬದಲಾವಣೆಗಳನ್ನು ಸೂಚಿಸಿತು. ಅದರಲ್ಲಿನ ಮುಖ್ಯ ಅಂಶವೆಂದರೆ ಸರ್ಕಾರದ ಕಾರ್ಯಕ್ರಮಗಳ ಫಲಾನುಭವಿಗಳ ಆಯ್ಕೆಗೆ ಗ್ರಾಮ ಮಟ್ಟಕ್ಕಿಂತ ಇನ್ನೂ ತಳಮಟ್ಟಕ್ಕೆ ಹೋಗಿ, ಗ್ರಾಮ ಸಭೆಯ ಕೆಳಗೆ ವಾರ್ಡ್ ಸಭೆಗಳನ್ನು ರಚಿಸಿ, ಆ ಎರಡು ಸಭೆಗಳು ಉನ್ನತ ರೀತಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಲಹೆಯನ್ನು ನೀಡಿತು.
ಈ ತಿದ್ದುಪಡಿಯ ಬಗ್ಗೆ ವಿಧಾನ ಮಂಡಲದ ಒಳಗೆ-ಹೊರಗೆ ವಿಸ್ತೃತ ರೀತಿಯಲ್ಲಿ ಚರ್ಚೆಗೆ ಒಳಗಾಗಿತ್ತು. ವಿಧಾನಮಂಡಲದಲ್ಲಿ ಈ ಕರಡು ತಿದ್ದುಪಡಿಯನ್ನು ಮಂಡಿಸುತ್ತಾ ಸ್ವತಃ ಸಚಿವರೇ ಇದನ್ನು ಸದನದ ಜಂಟಿ ಸಮಿತಿಯ ಪರಿಶೀಲನೆಗೆ ನೀಡಲು ಸಲಹೆ ನೀಡಿದರು. ಸದನ ಸಮಿತಿಯಲ್ಲಿ ಆಳವಾದ ಚರ್ಚೆ ನಡೆಯಿತು. 2003ರಲ್ಲಿ ಉಭಯ ಸದನಗಳಲ್ಲಿ ಸರ್ವಾನುಮತದಲ್ಲಿ ಈ ತಿದ್ದುಪಡಿ ಅಂಗೀಕಾರವಾಯಿತು. ಈ ಐತಿಹಾಸಿಕ ತಿದ್ದುಪಡಿ ಕರ್ನಾಟಕ ರಾಜ್ಯವನ್ನು ಜನಭಾಗವಹಿಸುವಿಕೆಯ ಪ್ರಜಾಪ್ರಭುತ್ವದಲ್ಲಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಆಲೋಚನೆಗಳಲ್ಲಿ ಮುಂಚೂಣಿಯಲ್ಲಿ ನೆಲೆಸುವಂತೆ ಮಾಡಿತು.
ಗ್ರಾಮ ಸಭೆ ಮತ್ತು ವಾರ್ಡ್ ಸಭೆಯಂತಹ ಮಹತ್ವದ ಬದಲಾವಣೆಯೊಡನೆ 2003ರ ಇನ್ನೊಂದು ಮಹತ್ವದ ಮೈಲಿಗಲ್ಲು ಎನ್ನಬಹುದಾದ ಬದಲಾವಣೆ ಎಂದರೆ ತಳಮಟ್ಟದಲ್ಲಿ ಜನಭಾಗವಹಿಸುವಿಕೆಯ ಮೂಲಕ 19 ಕಾರ್ಯಕ್ರಮಗಳ ಬಗ್ಗೆ ವಾರ್ಷಿಕ ಯೋಜನೆ, ಆಧ್ಯತಾಪಟ್ಟಿ ತಯಾರಿಸುವಿಕೆ, ಫಲಾನುಭವಿಗಳ ಆಯ್ಕೆಗೆ ಅವಕಾಶ ಸಿಕ್ಕಿತು. ಕುಡಿಯುವ ನೀರಿನ ಹಂಚಿಕೆ, ಶಿಕ್ಷಣ ಮೊದಲಾದ ಕಾರ್ಯಕ್ರಮಗಳ ಬಗ್ಗೆ ಈ ವಾರ್ಡ್ ಮತ್ತು ಗ್ರಾಮ ಸಭೆಗಳು ನಿರ್ಧಾರ ತೆಗೆದುಕೊಳ್ಳುವಂತಹ ಹಕ್ಕುಗಳು ನೀಡಲ್ಪಟ್ಟವು. 2003ರ ತಿದ್ದುಪಡಿಯ ಸೆಕ್ಷನ್ 3(3)(ಬಿ)ಯ ಮೂಲಕ ಯಾವುದೇ ಅನುಮಾನಕ್ಕೆ ಎಡೆ ಇಲ್ಲದಂತೆ ವಾರ್ಡ್ ಮತ್ತು ಗ್ರಾಮ ಸಭೆಗೆ ಫಲಾನುಭವಿಗಳ ಆಯ್ಕೆಯ ಹಕ್ಕನ್ನು ನೀಡಲಾಗಿದೆ. ವಾರ್ಡ್ ಸಭೆಗಳಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಸಭೆಯಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯತ್ ಮಂಡಿಸಬೇಕು. ಸೆಕ್ಷನ್ 3ಎ (3)(ಸಿ)ಯಂತೆ ಗ್ರಾಮ ಸಭೆ ಈ ಪಟ್ಟಿಯನ್ನು ಪರಿಶೀಲಿಸಿ ಆಧ್ಯತೆ ಮಾಡಿ ಅಂಗೀಕರಿಸಬೇಕು. ಹೀಗೆ ವಿಸ್ತೃತವಾಗಿ ಸೂಚಿಸಿದ ನಿಯಮಾವಳಿಗಳಿಗೆ ಒಳಪಟ್ಟು ತಯಾರಿಸಿದ ಫಲಾನುಭವಿಗಳ ಆಯ್ಕೆಯ ಪಟ್ಟಿಯನ್ನು ಮೇಲಿನ ಯಾವುದೇ ಹಂತದ ಸರ್ಕಾರಗಳು ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲ್ಪಟ್ಟಿದೆ.