ಮುಂಬರುವ ವಿಧಾನ ಸಭಾ ಚುನಾವಣೆಯ ಪೂರ್ವದಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ರಾಜ್ಯದಾದ್ಯಂತ "ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ" ಅಭಿಯಾನವನ್ನು ನಡೆಸಲು ಆಲೋಚಿಸಿದೆ.
ಉತ್ತಮ ಆಡಳಿತ ವ್ಯವಸ್ಥೆಗೆ ಭದ್ರಬುನಾದಿಯನ್ನು ಹಾಕುವಲ್ಲಿ ಮತದಾರರಾದ ನಾವೇ ಮೊದಲಿಗರು. ಮತದಾರರಾದ ನಾವು ನಮ್ಮ ಮತಗಳನ್ನು ವಿವೇಚನೆಯಿಂದ ಬಳಸಿದ್ದೇ ಆದರೆ, ನಮ್ಮ ದೇಶದ ರಾಜಕೀಯ ಪರಿಸ್ಥಿತಿಯನ್ನು ಬದಲಿಸಲು ಸಾಧ್ಯ ಎಂಬುದು ನಮ್ಮ ಬಲವಾದ ನಂಬಿಕೆ. ಆದ್ದರಿಂದ ಎಲ್ಲಾ ಮತದಾರರಿಗೆ ತಿಳುವಳಿಕೆ ನೀಡಿ, ಅವರನ್ನು ಸಶಕ್ತರನ್ನಾಗಿಸುವುದು ಅತ್ಯಂತ ಪ್ರಮುಖ ಕೆಲಸ ಎಂದು ನಾವು ಭಾವಿಸಿದ್ದೇವೆ. ಮತದಾರರು ಸೂಕ್ತ ಮಾಹಿತಿಯೊಂದಿಗೆ ಸಶಕ್ತರಾಗಿ ಜಾಗೃತರಾದರೆ, ಚುನಾವಣೆಯಲ್ಲಿ ಮತ ನೀಡುವಾಗ ಹಣ, ಹೆಂಡ ಮುಂತಾದ ಆಮಿಷಗಳಿಗೆ, ತಮ್ಮ ಮತವನ್ನು, ಆ ಮೂಲಕ ತಮ್ಮನ್ನು ಮಾರಿಕೊಳ್ಳದೇ ವಿವೇಚನೆಯಿಂದ ತಮ್ಮ ಮತವನ್ನು ಚಲಾಯಿಸಲು ಸಾಧ್ಯವಾಗುತ್ತದೆ.
ಇಂದಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಎಲ್ಲವನ್ನೂ ಕೊಳ್ಳುವ ವಸ್ತುಗಳೆಂದು ಭಾವಿಸಲಾಗುತ್ತಿದೆ. ಆದರೆ ನಾವು, ನಮ್ಮ ಮತ ಕೊಂಡುಕೊಳ್ಳುವ ವಸ್ತು ಎಂದು ಪರಿಗಣಿಸಲು ಬಿಡಬಾರದು. ಚುನಾವಣಾ ಸಮಯದಲ್ಲಿ ಮತದಾರರು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತೋರಿಸಬಹುದಾದ ಯಾವುದೇ ಆಮಿಷಕ್ಕೆ ಒಳಗಾಗದೇ ತಮ್ಮ ಮತವನ್ನು ಮಾರಿಕೊಳ್ಳುವಂತಹ ದುರಂತದ ವಾತಾವರಣದ ವಿರುದ್ಧ ಜಾಗೃತರಾಗಿ ಯೋಗ್ಯ ಅಭ್ಯರ್ಥಿಯ ಆಯ್ಕೆಗೆ ಮುನ್ನುಡಿ ಬರೆಯಬೇಕು. ಮತದಾರರೆಲ್ಲಾ ಒಂದೆಡೆ ಸೇರಿ ಈ ದೇಶದ ಪ್ರಜೆಗಳಾಗಿ, ಮತದಾರರಾಗಿ ತಮಗೆ ಇರುವ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು, ತಮ್ಮ ಕರ್ತವ್ಯಗಳ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಲು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಹಮ್ಮಿಕೊಂಡಿರುವ ಜಾಗೃತಿ ಆಂದೋಲನವೇ "ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ"
ಈಗಾಗಲೇ ಏಪ್ರಿಲ್-ಮೇ 2010ರಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆ, ಡಿಸೆಂಬರ್ 2010ರಲ್ಲಿ ನಡೆದ ತಾಲೂಕು ಹಾಗೂ ಜಿಲ್ಲಾ ಪಮಚಾಯತ್ ಚುನಾವಣೆಯ ಸಮಯದಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಈ ಅಭಿಯಾನ ನಡೆಸಿದೆ. ಈ ಅಭಿಯಾನಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಉತ್ತಮ ಆಡಳಿತ ವ್ಯವಸ್ಥೆಗೆ ಭದ್ರಬುನಾದಿಯನ್ನು ಹಾಕುವಲ್ಲಿ ಮತದಾರರಾದ ನಾವೇ ಮೊದಲಿಗರು. ಮತದಾರರಾದ ನಾವು ನಮ್ಮ ಮತಗಳನ್ನು ವಿವೇಚನೆಯಿಂದ ಬಳಸಿದ್ದೇ ಆದರೆ, ನಮ್ಮ ದೇಶದ ರಾಜಕೀಯ ಪರಿಸ್ಥಿತಿಯನ್ನು ಬದಲಿಸಲು ಸಾಧ್ಯ ಎಂಬುದು ನಮ್ಮ ಬಲವಾದ ನಂಬಿಕೆ. ಆದ್ದರಿಂದ ಎಲ್ಲಾ ಮತದಾರರಿಗೆ ತಿಳುವಳಿಕೆ ನೀಡಿ, ಅವರನ್ನು ಸಶಕ್ತರನ್ನಾಗಿಸುವುದು ಅತ್ಯಂತ ಪ್ರಮುಖ ಕೆಲಸ ಎಂದು ನಾವು ಭಾವಿಸಿದ್ದೇವೆ. ಮತದಾರರು ಸೂಕ್ತ ಮಾಹಿತಿಯೊಂದಿಗೆ ಸಶಕ್ತರಾಗಿ ಜಾಗೃತರಾದರೆ, ಚುನಾವಣೆಯಲ್ಲಿ ಮತ ನೀಡುವಾಗ ಹಣ, ಹೆಂಡ ಮುಂತಾದ ಆಮಿಷಗಳಿಗೆ, ತಮ್ಮ ಮತವನ್ನು, ಆ ಮೂಲಕ ತಮ್ಮನ್ನು ಮಾರಿಕೊಳ್ಳದೇ ವಿವೇಚನೆಯಿಂದ ತಮ್ಮ ಮತವನ್ನು ಚಲಾಯಿಸಲು ಸಾಧ್ಯವಾಗುತ್ತದೆ.
ಇಂದಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ಎಲ್ಲವನ್ನೂ ಕೊಳ್ಳುವ ವಸ್ತುಗಳೆಂದು ಭಾವಿಸಲಾಗುತ್ತಿದೆ. ಆದರೆ ನಾವು, ನಮ್ಮ ಮತ ಕೊಂಡುಕೊಳ್ಳುವ ವಸ್ತು ಎಂದು ಪರಿಗಣಿಸಲು ಬಿಡಬಾರದು. ಚುನಾವಣಾ ಸಮಯದಲ್ಲಿ ಮತದಾರರು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ತೋರಿಸಬಹುದಾದ ಯಾವುದೇ ಆಮಿಷಕ್ಕೆ ಒಳಗಾಗದೇ ತಮ್ಮ ಮತವನ್ನು ಮಾರಿಕೊಳ್ಳುವಂತಹ ದುರಂತದ ವಾತಾವರಣದ ವಿರುದ್ಧ ಜಾಗೃತರಾಗಿ ಯೋಗ್ಯ ಅಭ್ಯರ್ಥಿಯ ಆಯ್ಕೆಗೆ ಮುನ್ನುಡಿ ಬರೆಯಬೇಕು. ಮತದಾರರೆಲ್ಲಾ ಒಂದೆಡೆ ಸೇರಿ ಈ ದೇಶದ ಪ್ರಜೆಗಳಾಗಿ, ಮತದಾರರಾಗಿ ತಮಗೆ ಇರುವ ಶಕ್ತಿಯನ್ನು ಅರ್ಥ ಮಾಡಿಕೊಳ್ಳಲು, ತಮ್ಮ ಕರ್ತವ್ಯಗಳ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಲು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಹಮ್ಮಿಕೊಂಡಿರುವ ಜಾಗೃತಿ ಆಂದೋಲನವೇ "ನಾವು ಮತ್ತು ನಮ್ಮ ಮತ ಮಾರಾಟಕ್ಕಿಲ್ಲ"
ಈಗಾಗಲೇ ಏಪ್ರಿಲ್-ಮೇ 2010ರಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆ, ಡಿಸೆಂಬರ್ 2010ರಲ್ಲಿ ನಡೆದ ತಾಲೂಕು ಹಾಗೂ ಜಿಲ್ಲಾ ಪಮಚಾಯತ್ ಚುನಾವಣೆಯ ಸಮಯದಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಈ ಅಭಿಯಾನ ನಡೆಸಿದೆ. ಈ ಅಭಿಯಾನಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.