ಭಾರತದಲ್ಲಿ ಸ್ಥಳೀಯ ಸರ್ಕಾರಗಳ ಬಲವರ್ಧನೆ- ರಾಷ್ಟ್ರಮಟ್ಟದ 3ನೇ ಸಮಾಲೋಚನಾ ಕಾರ್ಯಕ್ರಮ
ದಿನಾಂಕ 22-11-2017 ರಿಂದ 23-11-2017ರಂದು Human Rights Advocacy and Research Foundation ದೆಹಲಿಯಲ್ಲಿ ಆಯೋಜಿಸಿದ್ದ “ಭಾರತದಲ್ಲಿ ಸ್ಥಳೀಯ ಸರ್ಕಾರಗಳ ಬಲವರ್ಧನೆ” ರಾಷ್ಟ್ರಮಟ್ಟದ 3ನೇ ಸಮಾಲೋಚನಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಪ್ರತಿನಿಧಿಗಳಾಗಿ ಶ್ರೀಮತಿ ಕೃಪಾ ಎಂ.ಎಂ. ಮತ್ತು ಶ್ರೀ ಎಸ್. ಜನಾರ್ಧನ್ ಮರವಂತೆ ಭಾಗವಹಿಸಿದ್ದರು. ಇದರಲ್ಲಿ 20 ರಾಜ್ಯಗಳಿಂದ 42 ವಿವಿಧ ಸಂಘ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ರಾಜ್ಯದ ವಿವಿಧ ಸರ್ಕಾರಿ ಅಂಗಸಂಸ್ಥೆಗಳ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿ ಸ್ಥಳೀಯ ಸರ್ಕಾರಗಳ ಪ್ರಸ್ತುತ ಪರಿಸ್ಥಿತಿ ಹಾಗೂ ತಳಮಟ್ಟದ ಪ್ರಜಾಪ್ರಭುತ್ವ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಪ್ರತಿನಿಧಿಗಳಾಗಿ ಭಾಗವಹಿಸಿದ ಶ್ರೀಮತಿ ಕೃಪಾ ಎಂ.ಎಂ. ಮತ್ತು ಶ್ರೀ ಎಸ್. ಜನಾರ್ಧನ್ ಮರವಂತೆ ಇವರು ಕರ್ನಾಟಕದಲ್ಲಿ ದೇಶಕ್ಕೇ ಮಾದರಿ ಎನ್ನುವಂತಹ (ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 2016ರಲ್ಲಿ ಕಾನೂನಾಗಿ ಜಾರಿಗೆ ಬಂದಿದ್ದು ಇದು ಸ್ಥಳೀಯಾಡಳಿತದ ಮೂಲ ಘಟಕವಾದ ಗ್ರಾಮ ಪಂಚಾಯತ್ ಮತ್ತು ಗ್ರಾಮ ಸಭೆಗಳಿಗೆ ಹಕ್ಕುಗಳು ಹಾಗೂ ಜವಾಬ್ದಾರಿಗಳನ್ನು ತಿಳಿಸುವ ಮೂಲಕ ತಳಮಟ್ಟದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುತ್ತದೆ.) ಕಾಯ್ದೆ ಇದ್ದರೂ ಕೂಡ ಅದರ ಆಶಯಕ್ಕೆ ಅನುಗುಣವಾಗಿ ಅನುಷ್ಟಾನ ಪ್ರಕ್ರಿಯೆಗೆ ಇರುವ ಸವಾಲುಗಳು, ಅಡೆತಡೆಗಳು ಹಾಗೂ ಆ ನಿಟ್ಟಿನಲ್ಲಿ ಸರ್ಕಾರದ ವಿಫಲತೆಗಳ ಬಗ್ಗೆ ಕೂಲಂಕುಷವಾಗಿ ವಿಷಯ ಪ್ರಸ್ತಾಪಿಸಿದರು.
ಈ ಸಮಾಲೋಚನೆಯು ಸಕಾಲಿಕ ಹಾಗೂ ಹೆಚ್ಚು ಅಗತ್ಯವಾಗಿತ್ತು. ಇದರಲ್ಲಿ ಬೇರೆ ಬೇರೆ ರಾಜ್ಯಗಳ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಆಡಳಿತದ ಸಂಸ್ಥೆಗಳು ರೂಪಿಸಿದ ಉತ್ತಮ ಮಾದರಿಗಳು/ಅಭ್ಯಾಸಗಳು ಮತ್ತು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಲಾಯಿತು. 73 ನೇ ಮತ್ತು 74 ನೇ ಸಾಂವಿಧಾನಿಕ ತಿದ್ದುಪಡಿಗೆ ಅನುಗುಣವಾಗಿ, ಪ್ರಜಾಸತ್ತಾತ್ಮಕ ವಿಕೇಂದ್ರೀಕರಣವನ್ನು ಸಾಕಾರಗೊಳಿಸುವಲ್ಲಿ ತಳಮಟ್ಟದಿಂದ ಜನಭಾಗವಹಿಸುವಿಕೆ, ಸ್ಥಳೀಯ ಸರ್ಕಾರಗಳ ಬಲವರ್ಧನೆ ಮತ್ತು ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತುಕೊಟ್ಟು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ಹಂತದ ಅಭಿಯಾನ, ಸಾಮರ್ಥ್ಯಾಭಿವೃದ್ಧಿ, ನೀತಿ – ನಿಯಮ - ಕಾಯ್ದೆ ತಿದ್ದುಪಡಿ ಮತ್ತು ಸಾಂವಿಧಾನಿಕ ತಿದ್ದುಪಡಿಗಳನ್ನು ತರುವ ಬಗ್ಗೆ ಸಮಾಲೋಚನೆಯಲ್ಲಿ ಕಾರ್ಯತಂತ್ರಗಳನ್ನು ರೂಪಿಸಲಾಯಿತು.
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಪ್ರತಿನಿಧಿಗಳಾಗಿ ಭಾಗವಹಿಸಿದ ಶ್ರೀಮತಿ ಕೃಪಾ ಎಂ.ಎಂ. ಮತ್ತು ಶ್ರೀ ಎಸ್. ಜನಾರ್ಧನ್ ಮರವಂತೆ ಇವರು ಕರ್ನಾಟಕದಲ್ಲಿ ದೇಶಕ್ಕೇ ಮಾದರಿ ಎನ್ನುವಂತಹ (ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ 1993 2016ರಲ್ಲಿ ಕಾನೂನಾಗಿ ಜಾರಿಗೆ ಬಂದಿದ್ದು ಇದು ಸ್ಥಳೀಯಾಡಳಿತದ ಮೂಲ ಘಟಕವಾದ ಗ್ರಾಮ ಪಂಚಾಯತ್ ಮತ್ತು ಗ್ರಾಮ ಸಭೆಗಳಿಗೆ ಹಕ್ಕುಗಳು ಹಾಗೂ ಜವಾಬ್ದಾರಿಗಳನ್ನು ತಿಳಿಸುವ ಮೂಲಕ ತಳಮಟ್ಟದ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುತ್ತದೆ.) ಕಾಯ್ದೆ ಇದ್ದರೂ ಕೂಡ ಅದರ ಆಶಯಕ್ಕೆ ಅನುಗುಣವಾಗಿ ಅನುಷ್ಟಾನ ಪ್ರಕ್ರಿಯೆಗೆ ಇರುವ ಸವಾಲುಗಳು, ಅಡೆತಡೆಗಳು ಹಾಗೂ ಆ ನಿಟ್ಟಿನಲ್ಲಿ ಸರ್ಕಾರದ ವಿಫಲತೆಗಳ ಬಗ್ಗೆ ಕೂಲಂಕುಷವಾಗಿ ವಿಷಯ ಪ್ರಸ್ತಾಪಿಸಿದರು.
ಈ ಸಮಾಲೋಚನೆಯು ಸಕಾಲಿಕ ಹಾಗೂ ಹೆಚ್ಚು ಅಗತ್ಯವಾಗಿತ್ತು. ಇದರಲ್ಲಿ ಬೇರೆ ಬೇರೆ ರಾಜ್ಯಗಳ ಪಂಚಾಯತ್ ರಾಜ್ ಹಾಗೂ ನಗರ ಸ್ಥಳೀಯ ಆಡಳಿತದ ಸಂಸ್ಥೆಗಳು ರೂಪಿಸಿದ ಉತ್ತಮ ಮಾದರಿಗಳು/ಅಭ್ಯಾಸಗಳು ಮತ್ತು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚಿಸಲಾಯಿತು. 73 ನೇ ಮತ್ತು 74 ನೇ ಸಾಂವಿಧಾನಿಕ ತಿದ್ದುಪಡಿಗೆ ಅನುಗುಣವಾಗಿ, ಪ್ರಜಾಸತ್ತಾತ್ಮಕ ವಿಕೇಂದ್ರೀಕರಣವನ್ನು ಸಾಕಾರಗೊಳಿಸುವಲ್ಲಿ ತಳಮಟ್ಟದಿಂದ ಜನಭಾಗವಹಿಸುವಿಕೆ, ಸ್ಥಳೀಯ ಸರ್ಕಾರಗಳ ಬಲವರ್ಧನೆ ಮತ್ತು ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತುಕೊಟ್ಟು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ಹಂತದ ಅಭಿಯಾನ, ಸಾಮರ್ಥ್ಯಾಭಿವೃದ್ಧಿ, ನೀತಿ – ನಿಯಮ - ಕಾಯ್ದೆ ತಿದ್ದುಪಡಿ ಮತ್ತು ಸಾಂವಿಧಾನಿಕ ತಿದ್ದುಪಡಿಗಳನ್ನು ತರುವ ಬಗ್ಗೆ ಸಮಾಲೋಚನೆಯಲ್ಲಿ ಕಾರ್ಯತಂತ್ರಗಳನ್ನು ರೂಪಿಸಲಾಯಿತು.