ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ 1993ರ ತಿದ್ದುಪಡಿ ಮಸೂದೆ 2014
ವಿಚಾರ ಸಂಕಿರಣ
ದಿನಾಂಕ: 07-03-2015
ಸ್ಥಳ: ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ, ರಜತಾದ್ರಿ, ಮಣಿಪಾಲ
ವಿಚಾರ ಸಂಕಿರಣ
ದಿನಾಂಕ: 07-03-2015
ಸ್ಥಳ: ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ, ರಜತಾದ್ರಿ, ಮಣಿಪಾಲ
ಶ್ರೀ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ಪಂಚಾಯತ್ ರಾಜ್ ಪರಿಣಿತರನ್ನೊಳಗೊಂಡ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ಸಮಿತಿಯು ಪ್ರಸ್ತುತ ಇರುವ 1993ರ ಕಾಯಿದೆಯನ್ನು ಕೂಲಂಕುಷವಾಗಿ ಅಭ್ಯಸಿಸಿ, ವಿಶ್ಲೇಷಿಸಿ, ಆಮೂಲಾಗ್ರ ಬದಲಾವಣೆಯ ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ಕರ್ನಾಟಕ ಸರ್ಕಾರಕ್ಕೆ ನೀಡಿದೆ. ಈ ವರದಿಯಲ್ಲಿ ಪ್ರಸ್ಥಾಪಿಸಿದ, ಮಸೂದೆಯು ಒಳಗೊಂಡ ಪ್ರಮುಖ ಅಂಶಗಳನ್ನು ಚರ್ಚಿಸಲು ಉಡುಪಿ ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರೊಡನೆ ದಿನಾಂಕ 07-03-2015ರಂದು ವಿಚಾರ ಸಂಕಿರಣ ಏರ್ಪಡಿಸಲಾಗಿತ್ತು. ಗಹನವಾದ ಚರ್ಚೆಯ ನಂತರ ಮಹಾತ್ಮಾ ಗಾಂಧಿಯವರ ಕನಸಿನ ಗ್ರಾಮ ಸ್ವರಾಜ್ಯದ ಕಲ್ಪನೆಯ ಆಶಯಗಳನ್ನು ಎತ್ತಿಹಿಡಿಯುವ ಈ ವರದಿಯ ಶಿಫಾರಸ್ಸುಗಳನ್ನು ಮತ್ತು ಮಸೂದೆಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಯಿತು. ಈ ವಿಚಾರ ಸಂಕಿರಣದ ಚರ್ಚೆಯ ಪ್ರಮುಖ ನಿರ್ಣಯಗಳು ಮತ್ತು ಅಂಶಗಳು, ಕಾರ್ಯಕ್ರಮದ ಭಾವಚಿತ್ರಗಳು ಮತ್ತು ಪತ್ರಿಕಾ ವರದಿಗಳು ಇಲ್ಲಿವೆ.
ವಿಚಾರ ಸಂಕಿರಣದ ಚರ್ಚೆಯ ಪ್ರಮುಖ ನಿರ್ಣಯಗಳು
ವಿಚಾರ ಸಂಕಿರಣದ ಚರ್ಚೆಯ ಪ್ರಮುಖ ನಿರ್ಣಯಗಳು
ಭಾವಚಿತ್ರಗಳು
ಪತ್ರಿಕಾ ವರದಿಗಳು