ಸರಣಿ ಧರಣಿಯ ಕೊನೆಯ ದಿನ ದಿನ - ಜುಲೈ 30, 2007
2007ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ವಿಧಾನ ಮಂಡಲದ ಎರಡೂ ಸದನಗಳು ಕರ್ನಾಟಕ ಪಂಚಾಯತ್ ಕಾಯಿದೆ 1993ಕ್ಕೆ ತಿದ್ದುಪಡಿಯೊಂದನ್ನು ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿದಾಗ ಈ ತಿದ್ದುಪಡಿ ಅಂಗೀಕಾರದ ವಿರುದ್ಧ ರಾಜ್ಯದ ಗ್ರಾಮ ಪಂಚಾಯತ್ ಸದಸ್ಯರು ಜುಲೈ 5, 2007ರಿಂದ ಜುಲೈ 30, 2007ರವರೆಗೆ ಜಿಲ್ಲಾವಾರು ಪ್ರತಿಭಟನೆ ನಡೆಸಿದರು. ಈ ಸರಣಿ ಧರಣಿಯ ಕೊನೆಯ ದಿನದಂದು ಎಲ್ಲರೂ ಸೇರಿ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದರು.