ಗೌರವಾನ್ವಿತ ಮತದಾರರ ಸ್ವಾಭಿಮಾನಿ ಆಂದೋಲನ - 2014
ಇಂದಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಹಣದಿಂದ ಕೊಳ್ಳಬಹುದು; ಎಲ್ಲವೂ ಮಾರಾಟಕ್ಕಿದೆ; ಎಲ್ಲವೂ ಮಾರಾಟಗೊಳ್ಳುವುದಕ್ಕೋಸ್ಕರವಾಗಿಯೇ ಇದೆ ಎನ್ನುವಂತಹ ವಾತಾವರಣ ಸೃಷ್ಟಿಗೊಂಡಿದೆ. ಅದನ್ನು ಕೊಳ್ಳಲು ಶತಾಯಗತಾಯವಾಗಿಯಾದರೂ, ಅನೈತಿಕವಾಗಿಯಾದರೂ ಹಣಗಳಿಸು ಎನ್ನುವಂತಹ ಕೆಟ್ಟ ಕೊಳಕು ಉತ್ಸಾಹ ಕಂಡುಬರುತ್ತಿದೆ.
ಈಗ ಬಂದಿರುವ ಲೋಕಸಭಾ ಚುನಾವಣೆ ಈ ಎಲ್ಲಾ ಚಟುವಟಿಕೆಗಳ ರಂಗಸಜ್ಜಿಕೆಯಾಗಿ ನಿಂತಿದೆ. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ಮತದಾನದ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವ ದೃಢ ಸಂಕಲ್ಪದಿಂದ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಸ್ವಾಭಿಮಾನಿ ಮತದಾರರ ಆಂದೋಲನವನ್ನು ಪ್ರಾರಂಭಿಸಿತು.
ಪ್ರಜಾಪ್ರಭುತ್ವದ ಪವಿತ್ರ ಜಾತ್ರೆಯಾಗಿರುವ ಈ ಚುನಾವಣೆ ಓಟು ಕೊಳ್ಳುವ ಮಾರುಕಟ್ಟೆ, ಜನರು ತಮ್ಮನ್ನು ತಾವು ಹರಾಜು ಹಾಕುವ ತಾಣ ಎಂಬಂತೆ ವರ್ತಿಸುವ ರಾಜಕೀಯ ಪಕ್ಷಗಳಿಗೆ, ಸ್ವಾಭಿಮಾನಿ ಮತದಾರರಾದ ನಾವು ದೇಶದ ಭವಿಷ್ಯಕ್ಕೆ ಅರ್ಥಪೂರ್ಣ ದಾರಿ ತೋರಿಸುವ ಛಾತಿ ನಮಗಿದೆ ಎಂದು ಈ ಅಭಿಯಾನದ ಮೂಲಕ ಸಾರಲಾಯಿತು.
ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ಅಲ್ಲದೇ ಇತರ ರಾಜ್ಯಗಳಲ್ಲಿ ನಡೆದ ಅಭಿಯಾನದ ಭಾವಚಿತ್ರಗಳು ಇಲ್ಲಿವೆ.
ಇಂದಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಹಣದಿಂದ ಕೊಳ್ಳಬಹುದು; ಎಲ್ಲವೂ ಮಾರಾಟಕ್ಕಿದೆ; ಎಲ್ಲವೂ ಮಾರಾಟಗೊಳ್ಳುವುದಕ್ಕೋಸ್ಕರವಾಗಿಯೇ ಇದೆ ಎನ್ನುವಂತಹ ವಾತಾವರಣ ಸೃಷ್ಟಿಗೊಂಡಿದೆ. ಅದನ್ನು ಕೊಳ್ಳಲು ಶತಾಯಗತಾಯವಾಗಿಯಾದರೂ, ಅನೈತಿಕವಾಗಿಯಾದರೂ ಹಣಗಳಿಸು ಎನ್ನುವಂತಹ ಕೆಟ್ಟ ಕೊಳಕು ಉತ್ಸಾಹ ಕಂಡುಬರುತ್ತಿದೆ.
ಈಗ ಬಂದಿರುವ ಲೋಕಸಭಾ ಚುನಾವಣೆ ಈ ಎಲ್ಲಾ ಚಟುವಟಿಕೆಗಳ ರಂಗಸಜ್ಜಿಕೆಯಾಗಿ ನಿಂತಿದೆ. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ಮತದಾನದ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವ ದೃಢ ಸಂಕಲ್ಪದಿಂದ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಸ್ವಾಭಿಮಾನಿ ಮತದಾರರ ಆಂದೋಲನವನ್ನು ಪ್ರಾರಂಭಿಸಿತು.
ಪ್ರಜಾಪ್ರಭುತ್ವದ ಪವಿತ್ರ ಜಾತ್ರೆಯಾಗಿರುವ ಈ ಚುನಾವಣೆ ಓಟು ಕೊಳ್ಳುವ ಮಾರುಕಟ್ಟೆ, ಜನರು ತಮ್ಮನ್ನು ತಾವು ಹರಾಜು ಹಾಕುವ ತಾಣ ಎಂಬಂತೆ ವರ್ತಿಸುವ ರಾಜಕೀಯ ಪಕ್ಷಗಳಿಗೆ, ಸ್ವಾಭಿಮಾನಿ ಮತದಾರರಾದ ನಾವು ದೇಶದ ಭವಿಷ್ಯಕ್ಕೆ ಅರ್ಥಪೂರ್ಣ ದಾರಿ ತೋರಿಸುವ ಛಾತಿ ನಮಗಿದೆ ಎಂದು ಈ ಅಭಿಯಾನದ ಮೂಲಕ ಸಾರಲಾಯಿತು.
ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ, ಅಲ್ಲದೇ ಇತರ ರಾಜ್ಯಗಳಲ್ಲಿ ನಡೆದ ಅಭಿಯಾನದ ಭಾವಚಿತ್ರಗಳು ಇಲ್ಲಿವೆ.
ಇತರ ರಾಜ್ಯಗಳು