ನೆರೆ, ನರೆಗಾ ಹಾಗೂ ಪಂಚಾಯತ್ ರಾಜ್ ವಿಷಯದಲ್ಲಿರುವ ಲೋಪದೋಷಗಳ ಕುರಿತು ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚೆ ಹಾಗೂ ಪತ್ರಿಕಾ ಗೋಷ್ಟಿಯ ಭಾವಚಿತ್ರಗಳು
ದಿನಾಂಕ: 17.02.2020
ಸ್ಥಳ: ಶಾಸಕರ ಭವನ ಬೆಂಗಳೂರು ಹಾಗೂ ಪ್ರೆಸ್ ಕ್ಲಬ್ ಬೆಂಗಳೂರು
ಉತ್ತರ ಕರ್ನಾಟಕದಲ್ಲಿ 2019ರಲ್ಲಿ ಬಂದ ನೆರೆಯು ಅಲ್ಲಿನ ಜನಜೀವನದ ಮೇಲೆ ತೀರಾ ಕೆಟ್ಟ ಪರಿಣಾಮವನ್ನು ಬೀರಿದ್ದು, ಅಲ್ಲಿನ ನೈಜ ಪರಿಸ್ಥಿಯ ಅಧ್ಯಯನ ಮಾಡಲಾಗಿದ್ದು ಅಲ್ಲಿನ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮತ್ತು ನರೆಗಾ ಕಾರ್ಯಕ್ರಮದ ಅನುಷ್ಟಾನದಲ್ಲಿರುವ ಲೋಪದೋಷಗಳು ಮತ್ತು ಗ್ರಾಮ ಪಂಚಾಯತ್ ಗಳು ಸ್ಥಳೀಯ ಸ್ವಯಂ ಸರ್ಕಾರವಾಗಿ ಕಾರ್ಯನಿರ್ವಹಿಸುವಲ್ಲಿ ಇರುವ ಅಡೆತಡೆಗಳ ನಿವಾರಣೆ: ಈ ಮೂರೂ ವಿಷಯಗಳಲ್ಲಿರುವ ಸಮಸ್ಯೆಗಳು ಹಾಗೂ ಲೋಪದೋಷಗಳ ಕುರಿತು ವಿಧಾನ ಸಭಾ ಅಧಿವೇಶನದ ಈ ಸಮಯದಲ್ಲಿ ಸ್ಥಳೀಯ ಸರ್ಕಾರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರೊಂದಿಗೆ ಸಂವಾದ ನಡೆಸಲಾಯಿತು ಹಾಗೂ ಈ ವಿಷಯಗಳ ಕುರಿತು ಪತ್ರಿಕಾ ಗೋಷ್ಟಿಯನ್ನು ನಡೆಸಲಾಯಿತು. ಅವುಗಳ ಭಾವಚಿತ್ರಗಳು: