ಪಂಚಾಯತ್ ರಾಜ್ ಸಬಲೀಕರಣ ಸಮಾವೇಶ 2012
ಮಂಡ್ಯ ಜಿಲ್ಲಾ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟ
ಸ್ಥಳ: ಮಂಡ್ಯ ಜಿಲ್ಲೆ
ದಿನಾಂಕ: 06-09-2012
ವಿಕೇಂದ್ರೀಕೃತ ಪ್ರಜಾಪ್ರಭುತ್ವಕ್ಕೆ ಒತ್ತು ನೀಡಲು ಮತ್ತು ಅಧಿಕಾರಶಾಹಿ ಉದ್ದೇಶದಿಂದ ನಡೆಯುವ ಸ್ಥಳೀಯ ಸರ್ಕಾರಗಳ ಅಧಿಕಾರ ಹಸ್ತಾಂತರಗಳನ್ನು ರಕ್ಷಿಸಲು, ಗ್ರಾಮ ಸಭೆ ಮತ್ತು ಗ್ರಾಮ ಪಂಚಾಯತ್ ಗಳನ್ನು ಸಬಲಗೊಳಿಸಲು ಮಂಡ್ಯ ಜಿಲ್ಲಾ ಗ್ರಾಮ ಪಂಚಾಯತ್ ಸದಸ್ಯರೆಲ್ಲಾ ಸೇರಿ ದಿನಾಂಕ 06-09-2012ರಂದು ಪಂಚಾಯತ್ ರಾಜ್ ಸಬಲೀಕರಣ ಸಮಾವೇಶವನ್ನು ಹಮ್ಮಿಕೊಂಡಿದ್ದರು. ಆಂದೋಲನವು ಈಗಾಗಲೇ ಎತ್ತಿರುವ ವಿಷಯಗಳ ಕುರಿತಾಗಿ ಆ ಸಮಾವೇಶದಲ್ಲಿ ಪ್ರಸ್ಥಾಪಿಸಲಾಯಿತು ಮತ್ತು ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.