ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಆಡಳಿತ ಯಾರ ಕೈಗೆ?
ನಿರ್ಣಯ ಹಾಗೂ ವಿವರಗಳಿಗಾಗಿ ಕ್ಲಿಕ್ಕಿಸಿ....
ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ: ಜನಾದೇಶವಿರುವ ಸ್ಥಳೀಯ ಸರ್ಕಾರದ ಪ್ರತಿನಿಧಿಗಳಿಂದ ಮತ್ತು ಗ್ರಾಮ ಸಭಾ ಸದಸ್ಯರಿಂದ ಸರ್ಕಾರಕ್ಕೆ ಹಕ್ಕೊತ್ತಾಯ
ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರೇ,
ಜನಾದೇಶವಿರುವ ಸ್ಥಳೀಯ ಸರ್ಕಾರದ ಪ್ರತಿನಿಧಿಗಳಾದ ನಾವು, ನಮ್ಮ ಪ್ರತಿನಿಧಿಯಾದ ತಮಗೆ ಮಾಡುತ್ತಿರುವ ಹಕ್ಕೊತ್ತಾಯ:
1. ಕೋವಿಡ್ ಪರಿಸ್ಥಿತಿಯ ಕಾರಣಕೊಟ್ಟು ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ ಸರಿಯಲ್ಲ. ಉಳಿದೆಲ್ಲಾ ಚಟುವಟಿಕೆಗಳು ಪ್ರಾರಂಭವಾಗುತ್ತಿರುವಾಗ, ಕೋವಿಡ್ ನಿಯಮಗಳನ್ನು ಪಾಲಿಸಿಯೇ ಗ್ರಾಮ ಮಟ್ಟದಲ್ಲಿ ನಡೆಯುವ ಚುನಾವಣೆ ನಡೆಸುವುದು ಕಷ್ಟವಲ್ಲ
2. ಕೋವಿಡ್ ಪರಿಸ್ಥಿತಿ ಎಲ್ಲಾ ಜಿಲ್ಲೆಗಳಲ್ಲಿ ಒಂದೇ ರೀತಿ ಇಲ್ಲ. ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವಿರುವಂತೆ ಕೋವಿಡ್ ನಿಯಮ ಪಾಲಿಸಿ ಚುನಾವಣೆ ನಡೆಸುವುದನ್ನು ಯೋಜಿಸಬಹುದು
3. ಕೋವಿಡ್ ಪರಿಸ್ಥಿತಿಯಿಂದ ಕಷ್ಟವಿರುವ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಚುನಾವಣೆ ನಡೆಸಬಹುದು
4. ಒಂದೊಮ್ಮೆ, ಚುನಾವಣಾ ಆಯೋಗ ಹೇಳಿರುವಂತೆ ಕೋವಿಡ್ *ಅಸಾಧಾರಣ ಪರಿಸ್ಥಿತಿ, ಹೀಗಾಗಿ ಚುನಾವಣೆ ಅಸಾಧ್ಯ ಎಂದಾದರೆ, ಆ ಪರಿಸ್ಥಿತಿಯನ್ನು ಇಲ್ಲಿಯವರೆಗೆ ಜಾರಿಪಡೆ(ಟಾಸ್ಕ್ ಫೋರ್ಸ್) ಮೂಲಕ ಸಮರ್ಥವಾಗಿ ನಿಭಾಯಿಸಿದ ಜನಾದೇಶವಿರುವ ಪ್ರಸ್ಥುತ ಸ್ಥಳೀಯ ಸರ್ಕಾರದ ವ್ಯವಸ್ಥೆಯನ್ನೇ ಚುನಾವಣೆ ಘೋಷಣೆಯಾಗುವವರೆಗೆ ಮುಂದುವರಿಸಲು ಸೂಕ್ತ ಕ್ರಮ ಕೈಗೊಳ್ಳಿ. ಇದು ಪ್ರಜಾಪ್ರಭುತ್ವದ ಮೂಲ ಆಶಯವನ್ನು ಎತ್ತಿಹಿಡಿಯುವ ಸಾಮಾಜಿಕ ನ್ಯಾಯ.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ತಾವು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಆಶಯವನ್ನು ಎತ್ತಿಹಿಡಿಯುತ್ತೀರಿ ಎಂಬ ನಂಬಿಕೆಯಿಂದ ತಮಗೆ ಈ ಸಂದೇಶ.
ಗ್ರಾಮಸ್ವರಾಜ್ಯದ ಕನಸನ್ನು ನನಸಾಗಿಸಲು ಸ್ಥಳೀಯ ಸರ್ಕಾರದ ಉಳಿವಿಗಾಗಿ ಈ ಆಂದೋಲನ
ಜನಾದೇಶವಿರುವ ಸ್ಥಳೀಯ ಸರ್ಕಾರದ ಪ್ರತಿನಿಧಿಗಳಾದ ನಾವು, ನಮ್ಮ ಪ್ರತಿನಿಧಿಯಾದ ತಮಗೆ ಮಾಡುತ್ತಿರುವ ಹಕ್ಕೊತ್ತಾಯ:
1. ಕೋವಿಡ್ ಪರಿಸ್ಥಿತಿಯ ಕಾರಣಕೊಟ್ಟು ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ ಸರಿಯಲ್ಲ. ಉಳಿದೆಲ್ಲಾ ಚಟುವಟಿಕೆಗಳು ಪ್ರಾರಂಭವಾಗುತ್ತಿರುವಾಗ, ಕೋವಿಡ್ ನಿಯಮಗಳನ್ನು ಪಾಲಿಸಿಯೇ ಗ್ರಾಮ ಮಟ್ಟದಲ್ಲಿ ನಡೆಯುವ ಚುನಾವಣೆ ನಡೆಸುವುದು ಕಷ್ಟವಲ್ಲ
2. ಕೋವಿಡ್ ಪರಿಸ್ಥಿತಿ ಎಲ್ಲಾ ಜಿಲ್ಲೆಗಳಲ್ಲಿ ಒಂದೇ ರೀತಿ ಇಲ್ಲ. ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವಿರುವಂತೆ ಕೋವಿಡ್ ನಿಯಮ ಪಾಲಿಸಿ ಚುನಾವಣೆ ನಡೆಸುವುದನ್ನು ಯೋಜಿಸಬಹುದು
3. ಕೋವಿಡ್ ಪರಿಸ್ಥಿತಿಯಿಂದ ಕಷ್ಟವಿರುವ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಚುನಾವಣೆ ನಡೆಸಬಹುದು
4. ಒಂದೊಮ್ಮೆ, ಚುನಾವಣಾ ಆಯೋಗ ಹೇಳಿರುವಂತೆ ಕೋವಿಡ್ *ಅಸಾಧಾರಣ ಪರಿಸ್ಥಿತಿ, ಹೀಗಾಗಿ ಚುನಾವಣೆ ಅಸಾಧ್ಯ ಎಂದಾದರೆ, ಆ ಪರಿಸ್ಥಿತಿಯನ್ನು ಇಲ್ಲಿಯವರೆಗೆ ಜಾರಿಪಡೆ(ಟಾಸ್ಕ್ ಫೋರ್ಸ್) ಮೂಲಕ ಸಮರ್ಥವಾಗಿ ನಿಭಾಯಿಸಿದ ಜನಾದೇಶವಿರುವ ಪ್ರಸ್ಥುತ ಸ್ಥಳೀಯ ಸರ್ಕಾರದ ವ್ಯವಸ್ಥೆಯನ್ನೇ ಚುನಾವಣೆ ಘೋಷಣೆಯಾಗುವವರೆಗೆ ಮುಂದುವರಿಸಲು ಸೂಕ್ತ ಕ್ರಮ ಕೈಗೊಳ್ಳಿ. ಇದು ಪ್ರಜಾಪ್ರಭುತ್ವದ ಮೂಲ ಆಶಯವನ್ನು ಎತ್ತಿಹಿಡಿಯುವ ಸಾಮಾಜಿಕ ನ್ಯಾಯ.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ತಾವು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಆಶಯವನ್ನು ಎತ್ತಿಹಿಡಿಯುತ್ತೀರಿ ಎಂಬ ನಂಬಿಕೆಯಿಂದ ತಮಗೆ ಈ ಸಂದೇಶ.
ಗ್ರಾಮಸ್ವರಾಜ್ಯದ ಕನಸನ್ನು ನನಸಾಗಿಸಲು ಸ್ಥಳೀಯ ಸರ್ಕಾರದ ಉಳಿವಿಗಾಗಿ ಈ ಆಂದೋಲನ