ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಆಡಳಿತ ಯಾರ ಕೈಗೆ?
ಪಂಚಾಯತ್ ಚುನಾವಣೆ ಮುಂದಕ್ಕೆ- ಆಡಳಿತಾಧಿಕಾರಿ/ಆಡಳಿತ ಸಮಿತಿಯೋ ಅಥವಾ ಮಧ್ಯಂತರ ಸರ್ಕಾರವಾಗಿ ಈಗ ಇರುವ ಸ್ಥಳೀಯ ಸರ್ಕಾರದ ಮುಂದುವರಿಕೆಯೋ..?
ಕರ್ನಾಟಕದಲ್ಲಿ ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಗೆ ಸಕಾಲದಲ್ಲಿ ಚುನಾವಣೆ ನಡೆಸುವುದು ಅಥವಾ ಚುನಾವಣೆ ಮುಂದೂಡಿದ್ದಲ್ಲಿ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿಯ ಬದಲಿಗೆ ಈಗ ಇರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ಸರ್ಕಾರವನ್ನೇ ಸ್ಥಳೀಯಾಡಳಿತ ಸಮಿತಿಯಾಗಿ ಚುನಾವಣೆ ನಡೆಯುವವರೆಗೆ ಮುಂದುವರೆಸುವ ಬಗ್ಗೆ ವಿವಿಧ ರೀತಿಯಲ್ಲಿ ಹಕ್ಕೊತ್ತಾಯ, ಹೋರಾಟಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಅದರ ಕುರಿತಾಗಿ ಮಾಹಿತಿಗಳು.
ಈ ಕುರಿತಾಗಿ ಸರ್ಕಾರ ಸೂಕ್ತವಾದ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ರಾಜ್ಯದ ವಿವಿಧ ಗ್ರಾಮ ಪಂಚಾಯತ್ಗಳು ಸರ್ಕಾರಕ್ಕೆ ಕಳುಹಿಸಿದ ಪಂಚಾಯತ್ ನಿರ್ಣಯಗಳು. |
ಗ್ರಾಮ ಪಂಚಾಯತ್ಗಳ ಚುನಾವಣೆ ಮುಂದೂಡಿಕೆಯ ಪರಿಣಾಮ ಹಾಗೂ ಕಾಯ್ದೆಯ ಮತ್ತು ಸಂವಿಧಾನದ ಅಂಶಗಳ ಕುರಿತಾದ ವಿಶ್ಲೇಷಣಾತ್ಮಕ ಲೇಖನಗಳು. |
ಗ್ರಾಮ ಪಂಚಾಯಿತಿ ಚುನಾವಣೆ ಮುಂದೂಡಿಕೆ ಇದಕ್ಕೆ ಸಂಬಂಧಿಸಿದ ಪತ್ರಿಕಾ ವರದಿಗಳು
|
ಈ ಕುರಿತಾಗಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಪತ್ರಿಕಾ ಪ್ರಕಟಣೆಗಳು |
ಈ ಕುರಿತಾಗಿ ವಿವಿಧ ಜಿಲ್ಲೆಗಳಲ್ಲಿ ಮಾಡಿದ ಹಕ್ಕೊತ್ತಾಯ ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ಆಂದೋಲನ |
ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡಲು ನಿರ್ಧರಿಸಿರುವ ಕರ್ನಾಟಕ ರಾಜ್ಯ ಸರ್ಕಾರಕ್ಕೆ 10 ಪ್ರಶ್ನೆಗಳು
ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡಲು ನಿರ್ಧರಿಸಿರುವ ಕರ್ನಾಟಕ ರಾಜ್ಯ ಸರ್ಕಾರಕ್ಕೆ 10 ಪ್ರಶ್ನೆಗಳು - ಕನ್ನಡ | |
File Size: | 65 kb |
File Type: |
ಪ್ರಸ್ತುತ ಇರುವ ಸ್ಥಳೀಯ ಸರ್ಕಾರವನ್ನೇ ಮುಂದಿನ ಚುನಾವಣೆವರೆಗೆ ಸ್ಥಳೀಯಾಡಳಿತ ಸಮಿತಿಯಾಗಿ ಮುಂದುವರೆಸುವಂತೆ ಒತ್ತಾಯಿಸಿ ಪಿಟಿಶನ್
ಪಿಟಿಶನ್ ಸಹಿ ಮಾಡಲು ಇಲ್ಲಿ ಕ್ಲಿಕ್ಕಿಸಿ..
ಕರ್ನಾಟಕದಲ್ಲಿ ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಗೆ ಸಕಾಲದಲ್ಲಿ ಚುನಾವಣೆ ನಡೆಸುವುದು ಅಥವಾ ಚುನಾವಣೆ ಮುಂದೂಡಿದ್ದಲ್ಲಿ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿಯ ಬದಲಿಗೆ ಈಗ ಇರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ಸರ್ಕಾರವನ್ನೇ ಸ್ಥಳೀಯಾಡಳಿತ ಸಮಿತಿಯಾಗಿ ಚುನಾವಣೆ ನಡೆಯುವವರೆಗೆ ಮುಂದುವರೆಸುವ ಬಗ್ಗೆ ಹಕ್ಕೊತ್ತಾಯ.
"ಸ್ಥಳೀಯ ಆಡಳಿತಕ್ಕಾಗಿ ಒಕ್ಕೊರಲ ಧ್ವನಿ ಎತ್ತಿ.."
ಸಂಪರ್ಕಕ್ಕಾಗಿ: 9945375430
ಕರ್ನಾಟಕದಲ್ಲಿ ಸ್ಥಳೀಯ ಸರ್ಕಾರ - ಗ್ರಾಮ ಪಂಚಾಯತ್ ಗೆ ಸಕಾಲದಲ್ಲಿ ಚುನಾವಣೆ ನಡೆಸುವುದು ಅಥವಾ ಚುನಾವಣೆ ಮುಂದೂಡಿದ್ದಲ್ಲಿ ಆಡಳಿತಾಧಿಕಾರಿ ಅಥವಾ ಆಡಳಿತ ಸಮಿತಿಯ ಬದಲಿಗೆ ಈಗ ಇರುವ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸ್ಥಳೀಯ ಸರ್ಕಾರವನ್ನೇ ಸ್ಥಳೀಯಾಡಳಿತ ಸಮಿತಿಯಾಗಿ ಚುನಾವಣೆ ನಡೆಯುವವರೆಗೆ ಮುಂದುವರೆಸುವ ಬಗ್ಗೆ ಹಕ್ಕೊತ್ತಾಯ.
"ಸ್ಥಳೀಯ ಆಡಳಿತಕ್ಕಾಗಿ ಒಕ್ಕೊರಲ ಧ್ವನಿ ಎತ್ತಿ.."
ಸಂಪರ್ಕಕ್ಕಾಗಿ: 9945375430
ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ: ಸ್ಥಳೀಯ ಸರ್ಕಾರದ ಪ್ರತಿನಿಧಿಗಳಿಂದ ಸರ್ಕಾರಕ್ಕೆ ಹಕ್ಕೊತ್ತಾಯ
ಆತ್ಮೀಯ ಸ್ನೇಹಿತರೇ,
ಸ್ಥಳೀಯ ಸರ್ಕಾರದ ಉಳಿವಿಗಾಗಿ ಎಲ್ಲೆಡೆ ಪ್ರಾರಂಭವಾಗಲಿ ಆಂದೋಲನ:
1. ಪತ್ರ ಚಳುವಳಿ
2. ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಯ ಮೊಬೈಲ್ ನಿಂದ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳಿಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ವಿಜಯಭಾಸ್ಕರ್ ಅವರಿಗೆ ವಾಟ್ಸ್ಯಾಪ್ ಸಂದೇಶ ಚಳುವಳಿ ಮುಖ್ಯಮಂತ್ರಿಯವರ ಕಾರ್ಯದರ್ಶಿ ಚೆನ್ನಬಸವೇಶ ಅವರ ಮೊಬೈಲ್ ಸಂಖ್ಯೆ: 94498 78584,
ಶ್ರೀ ವಿಜಯಭಾಸ್ಕರ್ ಅವರ ಮೊಬೈಲ್ ಸಂಖ್ಯೆ - 94821 31476
3. ಮುಖ್ಯಮಂತ್ರಿಗಳಿಗೆ ಇಮೇಲ್ ಸಂದೇಶ ಚಳುವಳಿ
ಇಮೇಲ್ ವಿಳಾಸ: [email protected] ಹಾಗೂ [email protected])
ರಾಜ್ಯದಾದ್ಯಂತ ಎಲ್ಲೆಡೆ ನಡೆಯಲಿ ಈ ಆಂದೋಲನ. ಸ್ಥಳೀಯ ಸರ್ಕಾರ ಉಳಿಯಬೇಕು ಎಂಬ ಆಶಯವಿರುವ ಪ್ರತಿಯೊಬ್ಬರೂ ಹೀಗೆ ಸಂದೇಶ ಕಳುಹಿಸಿ.
1 ಲಕ್ಷ ಸದಸ್ಯರಿರುವ ನಿಮ್ಮೆಲ್ಲರ ಸಂದೇಶ ಅವರನ್ನು ತಲುಪಿದರೆ ಖಂಡಿತವಾಗಿ ಸ್ಥಳೀಯ ಸರ್ಕಾರ ಉಳಿಯುತ್ತದೆ.
ತಾವು ಕಳುಹಿಸಿದ ಈ ಕೆಳಗಿನ ಸಂದೇಶದ ಸ್ಕ್ರೀನ್ ಶಾಟ್ ನಮಗೆ ಕಳುಹಿಸಿದರೆ ತುಂಬಾ ಸಂತೋಷ. ನಾವು ಆ ಎಲ್ಲವನ್ನೂ ಒಟ್ಟುಗೂಡಿಸಿ ಪುನಃ ಒತ್ತಾಯ ತರಬಹುದು.
ಸಂದೇಶ ಈ ಕೆಳಗಿನಂತಿರಲಿ:
ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರೇ,
ಜನಾದೇಶವಿರುವ ಸ್ಥಳೀಯ ಸರ್ಕಾರದ ಪ್ರತಿನಿಧಿಗಳಾದ ನಾವು, ನಮ್ಮ ಪ್ರತಿನಿಧಿಯಾದ ತಮಗೆ ಮಾಡುತ್ತಿರುವ ಹಕ್ಕೊತ್ತಾಯ:
1. ಕೋವಿಡ್ ಪರಿಸ್ಥಿತಿಯ ಕಾರಣಕೊಟ್ಟು ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ ಸರಿಯಲ್ಲ. ಉಳಿದೆಲ್ಲಾ ಚಟುವಟಿಕೆಗಳು ಪ್ರಾರಂಭವಾಗುತ್ತಿರುವಾಗ, ಕೋವಿಡ್ ನಿಯಮಗಳನ್ನು ಪಾಲಿಸಿಯೇ ಗ್ರಾಮ ಮಟ್ಟದಲ್ಲಿ ನಡೆಯುವ ಚುನಾವಣೆ ನಡೆಸುವುದು ಕಷ್ಟವಲ್ಲ
2. ಕೋವಿಡ್ ಪರಿಸ್ಥಿತಿ ಎಲ್ಲಾ ಜಿಲ್ಲೆಗಳಲ್ಲಿ ಒಂದೇ ರೀತಿ ಇಲ್ಲ. ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವಿರುವಂತೆ ಕೋವಿಡ್ ನಿಯಮ ಪಾಲಿಸಿ ಚುನಾವಣೆ ನಡೆಸುವುದನ್ನು ಯೋಜಿಸಬಹುದು
3. ಕೋವಿಡ್ ಪರಿಸ್ಥಿತಿಯಿಂದ ಕಷ್ಟವಿರುವ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಚುನಾವಣೆ ನಡೆಸಬಹುದು
4. ಒಂದೊಮ್ಮೆ, ಚುನಾವಣಾ ಆಯೋಗ ಹೇಳಿರುವಂತೆ ಕೋವಿಡ್ *ಅಸಾಧಾರಣ ಪರಿಸ್ಥಿತಿ, ಹೀಗಾಗಿ ಚುನಾವಣೆ ಅಸಾಧ್ಯ ಎಂದಾದರೆ, ಆ ಪರಿಸ್ಥಿತಿಯನ್ನು ಇಲ್ಲಿಯವರೆಗೆ ಜಾರಿಪಡೆ(ಟಾಸ್ಕ್ ಫೋರ್ಸ್) ಮೂಲಕ ಸಮರ್ಥವಾಗಿ ನಿಭಾಯಿಸಿದ ಜನಾದೇಶವಿರುವ ಪ್ರಸ್ಥುತ ಸ್ಥಳೀಯ ಸರ್ಕಾರದ ವ್ಯವಸ್ಥೆಯನ್ನೇ ಚುನಾವಣೆ ಘೋಷಣೆಯಾಗುವವರೆಗೆ ಮುಂದುವರಿಸಲು ಸೂಕ್ತ ಕ್ರಮ ಕೈಗೊಳ್ಳಿ. ಇದು ಪ್ರಜಾಪ್ರಭುತ್ವದ ಮೂಲ ಆಶಯವನ್ನು ಎತ್ತಿಹಿಡಿಯುವ ಸಾಮಾಜಿಕ ನ್ಯಾಯ.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ತಾವು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಆಶಯವನ್ನು ಎತ್ತಿಹಿಡಿಯುತ್ತೀರಿ ಎಂಬ ನಂಬಿಕೆಯಿಂದ ತಮಗೆ ಈ ಸಂದೇಶ.
ಗ್ರಾಮಸ್ವರಾಜ್ಯದ ಕನಸನ್ನು ನನಸಾಗಿಸಲು ಸ್ಥಳೀಯ ಸರ್ಕಾರದ ಉಳಿವಿಗಾಗಿ ಈ ಆಂದೋಲನ
ಸ್ಥಳೀಯ ಸರ್ಕಾರದ ಉಳಿವಿಗಾಗಿ ಎಲ್ಲೆಡೆ ಪ್ರಾರಂಭವಾಗಲಿ ಆಂದೋಲನ:
1. ಪತ್ರ ಚಳುವಳಿ
2. ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಯ ಮೊಬೈಲ್ ನಿಂದ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳಿಗೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀ ವಿಜಯಭಾಸ್ಕರ್ ಅವರಿಗೆ ವಾಟ್ಸ್ಯಾಪ್ ಸಂದೇಶ ಚಳುವಳಿ ಮುಖ್ಯಮಂತ್ರಿಯವರ ಕಾರ್ಯದರ್ಶಿ ಚೆನ್ನಬಸವೇಶ ಅವರ ಮೊಬೈಲ್ ಸಂಖ್ಯೆ: 94498 78584,
ಶ್ರೀ ವಿಜಯಭಾಸ್ಕರ್ ಅವರ ಮೊಬೈಲ್ ಸಂಖ್ಯೆ - 94821 31476
3. ಮುಖ್ಯಮಂತ್ರಿಗಳಿಗೆ ಇಮೇಲ್ ಸಂದೇಶ ಚಳುವಳಿ
ಇಮೇಲ್ ವಿಳಾಸ: [email protected] ಹಾಗೂ [email protected])
ರಾಜ್ಯದಾದ್ಯಂತ ಎಲ್ಲೆಡೆ ನಡೆಯಲಿ ಈ ಆಂದೋಲನ. ಸ್ಥಳೀಯ ಸರ್ಕಾರ ಉಳಿಯಬೇಕು ಎಂಬ ಆಶಯವಿರುವ ಪ್ರತಿಯೊಬ್ಬರೂ ಹೀಗೆ ಸಂದೇಶ ಕಳುಹಿಸಿ.
1 ಲಕ್ಷ ಸದಸ್ಯರಿರುವ ನಿಮ್ಮೆಲ್ಲರ ಸಂದೇಶ ಅವರನ್ನು ತಲುಪಿದರೆ ಖಂಡಿತವಾಗಿ ಸ್ಥಳೀಯ ಸರ್ಕಾರ ಉಳಿಯುತ್ತದೆ.
ತಾವು ಕಳುಹಿಸಿದ ಈ ಕೆಳಗಿನ ಸಂದೇಶದ ಸ್ಕ್ರೀನ್ ಶಾಟ್ ನಮಗೆ ಕಳುಹಿಸಿದರೆ ತುಂಬಾ ಸಂತೋಷ. ನಾವು ಆ ಎಲ್ಲವನ್ನೂ ಒಟ್ಟುಗೂಡಿಸಿ ಪುನಃ ಒತ್ತಾಯ ತರಬಹುದು.
ಸಂದೇಶ ಈ ಕೆಳಗಿನಂತಿರಲಿ:
ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ರಾಜ್ಯ ಚುನಾವಣಾ ಆಯೋಗದ ಮುಖ್ಯಸ್ಥರೇ,
ಜನಾದೇಶವಿರುವ ಸ್ಥಳೀಯ ಸರ್ಕಾರದ ಪ್ರತಿನಿಧಿಗಳಾದ ನಾವು, ನಮ್ಮ ಪ್ರತಿನಿಧಿಯಾದ ತಮಗೆ ಮಾಡುತ್ತಿರುವ ಹಕ್ಕೊತ್ತಾಯ:
1. ಕೋವಿಡ್ ಪರಿಸ್ಥಿತಿಯ ಕಾರಣಕೊಟ್ಟು ಗ್ರಾಮ ಪಂಚಾಯತ್ ಚುನಾವಣೆ ಮುಂದೂಡಿಕೆ ಸರಿಯಲ್ಲ. ಉಳಿದೆಲ್ಲಾ ಚಟುವಟಿಕೆಗಳು ಪ್ರಾರಂಭವಾಗುತ್ತಿರುವಾಗ, ಕೋವಿಡ್ ನಿಯಮಗಳನ್ನು ಪಾಲಿಸಿಯೇ ಗ್ರಾಮ ಮಟ್ಟದಲ್ಲಿ ನಡೆಯುವ ಚುನಾವಣೆ ನಡೆಸುವುದು ಕಷ್ಟವಲ್ಲ
2. ಕೋವಿಡ್ ಪರಿಸ್ಥಿತಿ ಎಲ್ಲಾ ಜಿಲ್ಲೆಗಳಲ್ಲಿ ಒಂದೇ ರೀತಿ ಇಲ್ಲ. ಆಯಾ ಜಿಲ್ಲೆಗಳ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯವಿರುವಂತೆ ಕೋವಿಡ್ ನಿಯಮ ಪಾಲಿಸಿ ಚುನಾವಣೆ ನಡೆಸುವುದನ್ನು ಯೋಜಿಸಬಹುದು
3. ಕೋವಿಡ್ ಪರಿಸ್ಥಿತಿಯಿಂದ ಕಷ್ಟವಿರುವ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಚುನಾವಣೆ ನಡೆಸಬಹುದು
4. ಒಂದೊಮ್ಮೆ, ಚುನಾವಣಾ ಆಯೋಗ ಹೇಳಿರುವಂತೆ ಕೋವಿಡ್ *ಅಸಾಧಾರಣ ಪರಿಸ್ಥಿತಿ, ಹೀಗಾಗಿ ಚುನಾವಣೆ ಅಸಾಧ್ಯ ಎಂದಾದರೆ, ಆ ಪರಿಸ್ಥಿತಿಯನ್ನು ಇಲ್ಲಿಯವರೆಗೆ ಜಾರಿಪಡೆ(ಟಾಸ್ಕ್ ಫೋರ್ಸ್) ಮೂಲಕ ಸಮರ್ಥವಾಗಿ ನಿಭಾಯಿಸಿದ ಜನಾದೇಶವಿರುವ ಪ್ರಸ್ಥುತ ಸ್ಥಳೀಯ ಸರ್ಕಾರದ ವ್ಯವಸ್ಥೆಯನ್ನೇ ಚುನಾವಣೆ ಘೋಷಣೆಯಾಗುವವರೆಗೆ ಮುಂದುವರಿಸಲು ಸೂಕ್ತ ಕ್ರಮ ಕೈಗೊಳ್ಳಿ. ಇದು ಪ್ರಜಾಪ್ರಭುತ್ವದ ಮೂಲ ಆಶಯವನ್ನು ಎತ್ತಿಹಿಡಿಯುವ ಸಾಮಾಜಿಕ ನ್ಯಾಯ.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ತಾವು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಆಶಯವನ್ನು ಎತ್ತಿಹಿಡಿಯುತ್ತೀರಿ ಎಂಬ ನಂಬಿಕೆಯಿಂದ ತಮಗೆ ಈ ಸಂದೇಶ.
ಗ್ರಾಮಸ್ವರಾಜ್ಯದ ಕನಸನ್ನು ನನಸಾಗಿಸಲು ಸ್ಥಳೀಯ ಸರ್ಕಾರದ ಉಳಿವಿಗಾಗಿ ಈ ಆಂದೋಲನ