ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ ರಾಜ್ಯ ಸಮಾವೇಶ - ಜುಲೈ 5, 2007
ಗ್ರಾಮ ಪಂಚಾಯತ್-ನ ಕೆಲಸ ಕಾರ್ಯಗಳ ಬಗ್ಗೆ ತಿಳಿದುಕೊಳ್ಳಲು, ಗ್ರಾಮ ಪಂಚಾಯತ್ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪಂಚಾಯತ್ ಸದಸ್ಯರ ಗಮನ ಸೆಳೆಯಲು ಜನರಿಗೆ ಸಂವಿಧಾನ ಬದ್ದ ಹಕ್ಕನ್ನು ಅಧಿಕಾರವನ್ನು ಸಂವಿಧಾನದ 73ನೇ ತಿದ್ದುಪಡಿ ದೊರಕಿಸಿಕೊಟ್ಟಿದೆ. ಆದರೆ ಈ ಎಲ್ಲಾ ಅಧಿಕಾರವನ್ನೂ ಬದಿಗೊತ್ತಿ, 2007ಏಪ್ರಿಲ್ ತಿಂಗಳಿನಲ್ಲಿ ಕರ್ನಾಟಕ ವಿಧಾನ ಮಂಡಲದ ಎರಡೂ ಸದನಗಳು ಕರ್ನಾಟಕ ಪಂಚಾಯತ್ ಕಾಯಿದೆ 1993ಕ್ಕೆ ತಿದ್ದುಪಡಿಯೊಂದನ್ನು ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಿತು. ಈ ತಿದ್ದುಪಡಿಯನ್ನು ಪ್ರತಿಭಟಿಸಿ, ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರತಿಭಟನಾ ಸಮಾವೇಶ ನಡೆಸಲಾಯಿತು.