73ನೆ ಸಂವಿಧಾನ ತಿದ್ದುಪಡಿ 25ನೇ ವರ್ಷಾಚರಣೆ
'ಗ್ರಾಮ ಸ್ವರಾಜ್ ಚಿಂತನ-ಮಂಥನ'
'ಗ್ರಾಮ ಸ್ವರಾಜ್ ಚಿಂತನ-ಮಂಥನ'
ದೇಶದಾದ್ಯಂತ ತ್ರಿಸ್ಥರ ಪಂಚಾಯತ್ ರಾಜ್ ವ್ಯವಸ್ಥೆಗೆ ಸುಭದ್ರ ತಳಪಾಯವನ್ನು ಹಾಕಿಕೊಟ್ಟ 73ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಗೆ ಈಗ 25ರ ಸಂಭ್ರಮ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ, ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಸಹಭಾಗಿತ್ವದಲ್ಲಿ 2018ನೇ ಫೆಬ್ರುವರಿ 23 ಮತ್ತು 24 ರಂದು ಉಡುಪಿಯಲ್ಲಿ ಹಮ್ಮಿಕೊಂಡಿದ್ದ 'ಗ್ರಾಮ ಸ್ವರಾಜ್ ಚಿಂತನ ಮಂಥನ' ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ.
ಮೊದಲನೆ ದಿನವಾದ 23ರಂದು 73ನೆ ಸಂವಿಧಾನ ತಿದ್ದುಪಡಿಯ ಒಳ - ಹೊರಗುಗಳು, ಆಶಯಗಳು, ಸ್ಥಳೀಯಾಡಳಿತದ ಬಲವರ್ಧನೆಗೆ ಪೂರಕವಾಗಿರುವ ಅಂಶಗಳು, ಸ್ಥಳೀಯಾಡಳಿತ ವ್ಯವಸ್ಥೆಯನ್ನು ಇನ್ನೂ ಗಟ್ಟಿಗೊಳಿಸುವಲ್ಲಿ ಆಗಬೇಕಾದ ತಿದ್ದುಪಡಿಗಳು, ಗ್ರಾಮ ಪಂಚಾಯತ್ ಗಳು ಸ್ವಯಂ-ಸರ್ಕಾರಗಳಾಗಿ ಕಾರ್ಯನಿರ್ವಹಿಸುವಲ್ಲಿ ಪೂರಕವಾಗಿರುವ 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ'ಯ ಅಂಶಗಳು, ಈ ಕಾಯಿದೆಯ ಅನುಷ್ಟಾನ ಪ್ರಕ್ರಿಯೆಯಲ್ಲಿ ಇರುವ ಸವಾಲುಗಳು, ಪರಿಣಾಮಕಾರಿ ಅನುಷ್ಠಾನದಲ್ಲಿ ತ್ರಿಸ್ಥರ ಪಂಚಾಯತ್ ಗಳ ಪಾತ್ರ ಮತ್ತು ಜವಾಬ್ದಾರಿ ಇವೆಲ್ಲದರ ಕುರಿತು ಸಮಗ್ರ ಚರ್ಚೆ ನಡೆದು, ಕಾಯಿದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಿರ್ಣಯಗಳು ಮತ್ತು ಯೋಜನೆಗಳನ್ನು ರೂಪಿಸಲಾಯಿತು. ಉಡುಪಿ ಜಿಲ್ಲೆಯಲ್ಲದೇ ಇತರ 8 ಜಿಲ್ಲೆಗಳಿಂದ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು.
ಎರಡನೇ ದಿನವಾದ 24ರಂದು ಮೊದಲ ದಿನದ ಕಾರ್ಯಕ್ರಮದ ಪ್ರಮುಖಾಂಶಗಳು ಮತ್ತು ಈ ಸಮಾವೇಶದ ನಿರ್ಣಯಗಳನ್ನು ಮಂಡಿಸಿ, ಅದಕ್ಕೆ ಸರ್ಕಾರದಿಂದ, ಸ್ಥಳಿಯಾಡಳಿತ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರಿಂದ, ಸ್ತಳೀಯಾಡಳಿತ ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶೈಕ್ಷಣಿಕ ಸಂಸ್ಥೆಗಳ ಪರಿಣಿತರಿಂದ ಅವರವರ ಬದ್ಧತೆಯ ಬಗ್ಗೆ ಪ್ರತಿಕ್ರಿಯೆ ಪಡೆಯಲಾಯಿತು.
ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣದ ಆಶಯದಿಂದ ಸ್ಥಳೀಯಾಡಳಿತ ಸಂಸ್ಥೆಗಳ ಬಲವರ್ಧನೆ, ಅವು ಸ್ವಯಂ- ಸರ್ಕಾರಗಳಾಗಿ ಕಾರ್ಯನಿರ್ವಹಿಸುವಲ್ಲಿ ಸರ್ಕಾರವು ಕೈಗೊಳ್ಳಲೇಬೇಕಾದಂತಹ ಕ್ರಮಗಳು, ಕಾನೂನಾತ್ಮಕವಾಗಿ ಸ್ಥಳೀಯಾಡಳಿತ ಸಂಸ್ಥೆಗಳಿರುವ ಅಧಿಕಾರ ಮತ್ತು ಹಕ್ಕುಗಳನ್ನು ಸ್ಥಾಪಿಸುವಲ್ಲಿ ಈ ಕಾರ್ಯಕ್ರಮದಲ್ಲಿ ಕೈಗೊಂಡ ನಿರ್ಣಯಗಳಿಗೆ ಎಲ್ಲರ ಸಹಕಾರ ತುಂಬಾ ಅಗತ್ಯವಿದೆ.
ಮೊದಲನೆ ದಿನವಾದ 23ರಂದು 73ನೆ ಸಂವಿಧಾನ ತಿದ್ದುಪಡಿಯ ಒಳ - ಹೊರಗುಗಳು, ಆಶಯಗಳು, ಸ್ಥಳೀಯಾಡಳಿತದ ಬಲವರ್ಧನೆಗೆ ಪೂರಕವಾಗಿರುವ ಅಂಶಗಳು, ಸ್ಥಳೀಯಾಡಳಿತ ವ್ಯವಸ್ಥೆಯನ್ನು ಇನ್ನೂ ಗಟ್ಟಿಗೊಳಿಸುವಲ್ಲಿ ಆಗಬೇಕಾದ ತಿದ್ದುಪಡಿಗಳು, ಗ್ರಾಮ ಪಂಚಾಯತ್ ಗಳು ಸ್ವಯಂ-ಸರ್ಕಾರಗಳಾಗಿ ಕಾರ್ಯನಿರ್ವಹಿಸುವಲ್ಲಿ ಪೂರಕವಾಗಿರುವ 'ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ'ಯ ಅಂಶಗಳು, ಈ ಕಾಯಿದೆಯ ಅನುಷ್ಟಾನ ಪ್ರಕ್ರಿಯೆಯಲ್ಲಿ ಇರುವ ಸವಾಲುಗಳು, ಪರಿಣಾಮಕಾರಿ ಅನುಷ್ಠಾನದಲ್ಲಿ ತ್ರಿಸ್ಥರ ಪಂಚಾಯತ್ ಗಳ ಪಾತ್ರ ಮತ್ತು ಜವಾಬ್ದಾರಿ ಇವೆಲ್ಲದರ ಕುರಿತು ಸಮಗ್ರ ಚರ್ಚೆ ನಡೆದು, ಕಾಯಿದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಿರ್ಣಯಗಳು ಮತ್ತು ಯೋಜನೆಗಳನ್ನು ರೂಪಿಸಲಾಯಿತು. ಉಡುಪಿ ಜಿಲ್ಲೆಯಲ್ಲದೇ ಇತರ 8 ಜಿಲ್ಲೆಗಳಿಂದ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದರು.
ಎರಡನೇ ದಿನವಾದ 24ರಂದು ಮೊದಲ ದಿನದ ಕಾರ್ಯಕ್ರಮದ ಪ್ರಮುಖಾಂಶಗಳು ಮತ್ತು ಈ ಸಮಾವೇಶದ ನಿರ್ಣಯಗಳನ್ನು ಮಂಡಿಸಿ, ಅದಕ್ಕೆ ಸರ್ಕಾರದಿಂದ, ಸ್ಥಳಿಯಾಡಳಿತ ಕ್ಷೇತ್ರದಿಂದ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರಿಂದ, ಸ್ತಳೀಯಾಡಳಿತ ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶೈಕ್ಷಣಿಕ ಸಂಸ್ಥೆಗಳ ಪರಿಣಿತರಿಂದ ಅವರವರ ಬದ್ಧತೆಯ ಬಗ್ಗೆ ಪ್ರತಿಕ್ರಿಯೆ ಪಡೆಯಲಾಯಿತು.
ಪಂಚಾಯತ್ ರಾಜ್ ವ್ಯವಸ್ಥೆಯ ಸಬಲೀಕರಣದ ಆಶಯದಿಂದ ಸ್ಥಳೀಯಾಡಳಿತ ಸಂಸ್ಥೆಗಳ ಬಲವರ್ಧನೆ, ಅವು ಸ್ವಯಂ- ಸರ್ಕಾರಗಳಾಗಿ ಕಾರ್ಯನಿರ್ವಹಿಸುವಲ್ಲಿ ಸರ್ಕಾರವು ಕೈಗೊಳ್ಳಲೇಬೇಕಾದಂತಹ ಕ್ರಮಗಳು, ಕಾನೂನಾತ್ಮಕವಾಗಿ ಸ್ಥಳೀಯಾಡಳಿತ ಸಂಸ್ಥೆಗಳಿರುವ ಅಧಿಕಾರ ಮತ್ತು ಹಕ್ಕುಗಳನ್ನು ಸ್ಥಾಪಿಸುವಲ್ಲಿ ಈ ಕಾರ್ಯಕ್ರಮದಲ್ಲಿ ಕೈಗೊಂಡ ನಿರ್ಣಯಗಳಿಗೆ ಎಲ್ಲರ ಸಹಕಾರ ತುಂಬಾ ಅಗತ್ಯವಿದೆ.
'ಗ್ರಾಮ ಸ್ವರಾಜ್ ಚಿಂತನ ಮಂಥನ' ಕಾರ್ಯಕ್ರಮದಲ್ಲಿ ಕೈಗೊಂಡ ನಿರ್ಣಯಗಳು, ಹಕ್ಕೊತ್ತಾಯಗಳು ಮತ್ತು ಶಿಫಾರಸ್ಸುಗಳು
ಗ್ರಾಮ ಸ್ವರಾಜ್ ಚಿಂತನ ಮಂಥನ
ದಿನಾಂಕ 23-02-2018 ಸ್ಥಳ: ಡಾll ವಿ. ಎಸ್. ಆಚಾರ್ಯ ಸಭಾಂಗಣ, ಉಡುಪಿ ಜಿಲ್ಲಾ ಪಂಚಾಯತ್, ರಜತಾದ್ರಿ ಮಣಿಪಾಲ |
ಗ್ರಾಮ ಸ್ವರಾಜ್ ಚಿಂತನ ಮಂಥನ
ದಿನಾಂಕ 24-02-2018 ಸ್ಥಳ: ಅಟಲ್ ಬಿಹಾರಿ ವಾಜಪೇಯಿ ಸಭಾಂಗಣ, ರಜತಾದ್ರಿ, ಮಣಿಪಾಲ, ಉಡುಪಿ |
73ನೆ ಸಂವಿಧಾನ ತಿದ್ದುಪಡಿಯ 25ನೆ ವರ್ಷಾಚರಣೆಯ ಅಂಗವಾಗಿ "ಜನಪ್ರತಿನಿಧಿ" ಪ್ರತಿಕೆಯು ಹೊರತಂದ ವಿಶೇಷ ಸಂಚಿಕೆಯಲ್ಲಿನ ಪಂಚಾಯತ್ ರಾಜ್ ವಿಷಯದ ಕುರಿತ ಲೇಖನಗಳು..
|
|
|
|
- ಶ್ರೀ ದಾಮೋದರ ಆಚಾರ್ಯ, ಮೊದಲ ಪ್ರಕಟಣೆ: ಪ್ರಜಾವಾಣಿ, ದಿನಾಂಕ: 23-2-2018 - ಶ್ರೀಮತಿ ಕೃಪಾ ಎಂ.ಎಂ., ಮೊದಲ ಪ್ರಕಟಣೆ: ಹೊಸದಿಗಂತ, ದಿನಾಂಕ: 22-2-2018
ಪತ್ರಿಕಾ ಪ್ರಕಟಣೆ ಮತ್ತು ಪತ್ರಿಕಾ ವರದಿಗಳು
|
|