ಶ್ರೀ ರಮೇಶ ಕುಮಾರ್ ನೇತೃತ್ವದ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ಸಮಿತಿಯ ವರದಿ ಹಾಗೂ ಇತರ ಮಾಹಿತಿಗಳು
ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ಸಮಿತಿಯು ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿಯ ಕುರಿತಾಗಿ ರಾಜ್ಯ ಸರ್ಕಾರಕ್ಕೆ ಮಾಡಿದ ವರದಿಯನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ.
ಕರ್ನಾಟಕ ರಾಜ್ಯದಲ್ಲಿ ಸ್ಥಳೀಯ ಸರ್ಕಾರಗಳನ್ನು ಬಲವರ್ಧನೆಗೊಳಿಸಬೇಕು ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಎಲ್ಲಾ ಮೂರು ಹಂತಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು, ಅಗತ್ಯವಾದ ಶಿಫಾರಸ್ಸುಗಳನ್ನು ಮಾಡುವಂತೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ಅವರು ಮಾಜಿ ಸಭಾಪತಿಗಳಾದ ಶ್ರೀ ರಮೇಶಕುಮಾರ್ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲು ಆದೇಶ ಹೊರಡಿಸಿದರು. ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ, 1993ನ್ನು ವಿಷದವಾಗಿ ಪರಿಶೀಲಿಸಿ, ತಿದ್ದುಪಡಿಗೆ ಶಿಫಾರಸ್ಸು ಮಾಡುವ ಜವಾಬ್ದಾರಿಯನ್ನು ಈ ಸಮಿತಿಗೆ ನೀಡಲಾಯಿತು. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಸಂಚಾಲಕರಾದ ಶ್ರೀಮತಿ ನಂದನ ರೆಡ್ಡಿಯವರು ಈ ಸಮಿತಿಯ ಸದಸ್ಯರಾಗಿದ್ದರು.
ಅನೇಕ ತಿದ್ದುಪಡಿ, ವಿವಿಧ ಆದೇಶ, ಸುತ್ತೋಲೆಗಳ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ, 1993ನ್ನು ಕೇಂದ್ರೀಕರಣದ ಆಶಯಕ್ಕೆ ಬದ್ಧವಾಗಿ ಆಚರಿಸಲು ಆಗದ ಪರಿಸ್ಥಿತಿ ತರಲಾಗಿದೆ ಎಂಬುದನ್ನು ಈ ಸಮಿತಿಯು ಗುರುತಿಸಿತು. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್-ಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆ ಮತ್ತು ಕಾರ್ಯಕ್ರಮಗಳನ್ನು ವಿತರಿಸುವ 'ದಲ್ಲಾಳಿ'ಗಳನ್ನಾಗಿ ಪರಿವರ್ತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ಸಮಿತಿಯು ವಿಕೇಂದ್ರೀಕರಣದ ಆಶಯದಂತೆ ತ್ರಿಸ್ತರದಲ್ಲಿ ಪಂಚಾಯತ್-ಗಳು ಕಾರ್ಯನಿರ್ವಹಿಸಲು ಅನುವಾಗುವಂತೆ ಸವಿಸ್ತಾರವಾದ ಹಾಗೂ ಆಳವಾದ ಶಿಫಾರಸ್ಸುಗಳನ್ನು ಮಾಡುವುದರ ಮೂಲಕ, ವಿಕೇಂದ್ರೀಕರಣಕ್ಕೆ ಹಾಗೂ ಪಂಚಾಯತ್ ರಾಜ್ ಸರ್ಕಾರಗಳಿಗೆ ನಿಜ ಅರ್ಥದಲ್ಲಿ ಸ್ವಾಯತ್ತ ಸರ್ಕಾರಗಳಾಗಿ ಕೆಲಸ ಮಾಡಲು ದಿಕ್ಸೂಚಿಯಾಗುವಂತಹ ಶಿಫಾರಸ್ಸುಗಳನ್ನು ಮಾಡಿದೆ. ಆ ಮೂಲಕ ರಾಜ್ಯದ ಸಂವಿಧಾನದ 73ನೇ ತಿದ್ದುಪಡಿಯ ಆಶಯಗಳನ್ನು ಆಚರಣೆಗೆ ತರುವಲ್ಲಿ 'ಗ್ರಾಮ ಸ್ವರಾಜ್' ಸ್ಥಾಪನೆಗೆ ಇದು ದಿಕ್ಸೂಚಿಯಾಗಿದೆ.
ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ವರದಿ - 'ಗ್ರಾಮ ಸ್ವರಾಜ್ಯಕ್ಕೆ ಪಥ' ದ ಪ್ರಸ್ತುತಿ
ಕರ್ನಾಟಕ ರಾಜ್ಯದಲ್ಲಿ ಸ್ಥಳೀಯ ಸರ್ಕಾರಗಳನ್ನು ಬಲವರ್ಧನೆಗೊಳಿಸಬೇಕು ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಎಲ್ಲಾ ಮೂರು ಹಂತಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು, ಅಗತ್ಯವಾದ ಶಿಫಾರಸ್ಸುಗಳನ್ನು ಮಾಡುವಂತೆ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್ ಅವರು ಮಾಜಿ ಸಭಾಪತಿಗಳಾದ ಶ್ರೀ ರಮೇಶಕುಮಾರ್ ಅವರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಲು ಆದೇಶ ಹೊರಡಿಸಿದರು. ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ, 1993ನ್ನು ವಿಷದವಾಗಿ ಪರಿಶೀಲಿಸಿ, ತಿದ್ದುಪಡಿಗೆ ಶಿಫಾರಸ್ಸು ಮಾಡುವ ಜವಾಬ್ದಾರಿಯನ್ನು ಈ ಸಮಿತಿಗೆ ನೀಡಲಾಯಿತು. ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಸಂಚಾಲಕರಾದ ಶ್ರೀಮತಿ ನಂದನ ರೆಡ್ಡಿಯವರು ಈ ಸಮಿತಿಯ ಸದಸ್ಯರಾಗಿದ್ದರು.
ಅನೇಕ ತಿದ್ದುಪಡಿ, ವಿವಿಧ ಆದೇಶ, ಸುತ್ತೋಲೆಗಳ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ, 1993ನ್ನು ಕೇಂದ್ರೀಕರಣದ ಆಶಯಕ್ಕೆ ಬದ್ಧವಾಗಿ ಆಚರಿಸಲು ಆಗದ ಪರಿಸ್ಥಿತಿ ತರಲಾಗಿದೆ ಎಂಬುದನ್ನು ಈ ಸಮಿತಿಯು ಗುರುತಿಸಿತು. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತ್-ಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆ ಮತ್ತು ಕಾರ್ಯಕ್ರಮಗಳನ್ನು ವಿತರಿಸುವ 'ದಲ್ಲಾಳಿ'ಗಳನ್ನಾಗಿ ಪರಿವರ್ತಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ತಿದ್ದುಪಡಿ ಸಮಿತಿಯು ವಿಕೇಂದ್ರೀಕರಣದ ಆಶಯದಂತೆ ತ್ರಿಸ್ತರದಲ್ಲಿ ಪಂಚಾಯತ್-ಗಳು ಕಾರ್ಯನಿರ್ವಹಿಸಲು ಅನುವಾಗುವಂತೆ ಸವಿಸ್ತಾರವಾದ ಹಾಗೂ ಆಳವಾದ ಶಿಫಾರಸ್ಸುಗಳನ್ನು ಮಾಡುವುದರ ಮೂಲಕ, ವಿಕೇಂದ್ರೀಕರಣಕ್ಕೆ ಹಾಗೂ ಪಂಚಾಯತ್ ರಾಜ್ ಸರ್ಕಾರಗಳಿಗೆ ನಿಜ ಅರ್ಥದಲ್ಲಿ ಸ್ವಾಯತ್ತ ಸರ್ಕಾರಗಳಾಗಿ ಕೆಲಸ ಮಾಡಲು ದಿಕ್ಸೂಚಿಯಾಗುವಂತಹ ಶಿಫಾರಸ್ಸುಗಳನ್ನು ಮಾಡಿದೆ. ಆ ಮೂಲಕ ರಾಜ್ಯದ ಸಂವಿಧಾನದ 73ನೇ ತಿದ್ದುಪಡಿಯ ಆಶಯಗಳನ್ನು ಆಚರಣೆಗೆ ತರುವಲ್ಲಿ 'ಗ್ರಾಮ ಸ್ವರಾಜ್' ಸ್ಥಾಪನೆಗೆ ಇದು ದಿಕ್ಸೂಚಿಯಾಗಿದೆ.
ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ ವರದಿ - 'ಗ್ರಾಮ ಸ್ವರಾಜ್ಯಕ್ಕೆ ಪಥ' ದ ಪ್ರಸ್ತುತಿ
"ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ಕಾಯಿದೆ'' ಯ ಅನುಷ್ಟಾನಕ್ಕೆ ಸಂಬಂಧಿಸಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆಯಾದ ಪ್ರತಿನಿಧಿಗಳೊಂದಿಗೆ ನಡೆದ ಸಭೆ
ದಿನಾಂಕ 25ನೇ ಫೆಬ್ರುವರಿ 2016ರಂದು ಜಾರಿಗೆ ಬಂದ "ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ಕಾಯಿದೆ'' ಯ ಅನುಷ್ಟಾನಕ್ಕೆ ಸಂಬಂಧಿಸಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆಯಾದ ಪ್ರತಿನಿಧಿಗಳೊಂದಿಗೆ ದಿನಾಂಕ 03-03-2016ರಂದು ಶಾಸಕರ ಭವನ ಬೆಂಗಳೂರಿನಲ್ಲಿ ನಡೆಯಿತು.
ಕರ್ನಾಟಕ ರಾಜ್ಯ ಬಜೆಟ್ ತಯಾರಿಕೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು (ಸಿಡಬ್ಲ್ಯೂಸಿಯು ಇದರ ಕಾರ್ಯಾಲಯವಾಗಿ ಕಾರ್ಯನಿರ್ವಹಿಸುತ್ತಿದೆ) ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆಯಾದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿತು.
ಕರ್ನಾಟಕ ಸರ್ಕಾರದಿಂದ ರಚಿಸಲ್ಪಟ್ಟ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾದ ಶ್ರೀ ವಿ.ವೈ.ಘೋರ್ಪಡೆ, ಕರ್ನಾಟಕ ಪಂಚಾಯತ್ ಪರಿಷತ್ ನ ಸದಸ್ಯರು ಮತ್ತು ಶ್ರೀ ರಮೇಶ್ ಕುಮಾರ್ ಸಮಿತಿಯ ಸದಸ್ಯರೂ ಆದ ಶ್ರೀ ಸಿ.ನಾರಾಯಣ ಸ್ವಾಮಿ, ವಿಧಾನ ಪರಿಷತ್ ಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಬಜೆಟ್ ತಯಾರಿಕೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನವು (ಸಿಡಬ್ಲ್ಯೂಸಿಯು ಇದರ ಕಾರ್ಯಾಲಯವಾಗಿ ಕಾರ್ಯನಿರ್ವಹಿಸುತ್ತಿದೆ) ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ಆಯ್ಕೆಯಾದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿತು.
ಕರ್ನಾಟಕ ಸರ್ಕಾರದಿಂದ ರಚಿಸಲ್ಪಟ್ಟ ಉನ್ನತಾಧಿಕಾರ ಸಮಿತಿಯ ಅಧ್ಯಕ್ಷರಾದ ಶ್ರೀ ವಿ.ವೈ.ಘೋರ್ಪಡೆ, ಕರ್ನಾಟಕ ಪಂಚಾಯತ್ ಪರಿಷತ್ ನ ಸದಸ್ಯರು ಮತ್ತು ಶ್ರೀ ರಮೇಶ್ ಕುಮಾರ್ ಸಮಿತಿಯ ಸದಸ್ಯರೂ ಆದ ಶ್ರೀ ಸಿ.ನಾರಾಯಣ ಸ್ವಾಮಿ, ವಿಧಾನ ಪರಿಷತ್ ಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಭಾವಚಿತ್ರಗಳು
"ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ (ಎರಡನೇ ತಿದ್ದುಪಡಿ) ಮಸೂದೆ" ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರ.
ಮಂಡಿಸಿರುವ ಮಸೂದೆಯಲ್ಲಿ ಸೇರ್ಪಡೆ ಮಾಡಿರುವ ಅಂಶಗಳು (ಸಂಕ್ಷಿಪ್ತ) - ಕನ್ನಡ | |
File Size: | 65 kb |
File Type: |
ಮಂಡಿಸಿರುವ ಮಸೂದೆಯಲ್ಲಿ ಕೈಬಿಟ್ಟಿರುವ ಪ್ರಮುಖ ಅಂಶಗಳು (ಸಂಕ್ಷಿಪ್ತ) -ಕನ್ನಡ | |
File Size: | 55 kb |
File Type: |
ಮಂಡಿಸಿರುವ ಮಸೂದೆಯಲ್ಲಿ ಸೇರ್ಪಡೆ ಮಾಡಿರುವ ಅಂಶಗಳು (ವಿವರಣೆಯೊಂದಿಗೆ) - ಕನ್ನಡ | |
File Size: | 221 kb |
File Type: |
ಮಂಡಿಸಿರುವ ಮಸೂದೆಯಲ್ಲಿ ಸೇರ್ಪಡೆ ಮಾಡಿರುವ ಅಂಶಗಳು (ವಿವರಣೆಯೊಂದಿಗೆ) - ಇಂಗ್ಲೀಷ್ | |
File Size: | 161 kb |
File Type: |
ಮಂಡಿಸಿರುವ ಮಸೂದೆಯಲ್ಲಿ ಕೈಬಿಟ್ಟಿರುವ ಅಂಶಗಳು (ವಿವರಣೆಯೊಂದಿಗೆ) - ಇಂಗ್ಲೀಷ್ | |
File Size: | 114 kb |
File Type: |
|
|
ಗ್ರಾಮೀಣಾಭಿವ್ರದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ತೆರೆದ ಪತ್ರ -14-08-2015 -ಕನ್ನಡ | |
File Size: | 226 kb |
File Type: |
ವರದಿ ಮಂಡನೆಯ ಮತ್ತು ಆ ಕುರಿತಾದ ಚರ್ಚೆಯ ಭಾವಚಿತ್ರಗಳು